News Karnataka Kannada
Wednesday, May 01 2024
ಮೈಸೂರು

ನಂಜನಗೂಡು: ಸಾಲ ಮನ್ನಾ ಕುರಿತು ತೇಜಸ್ವಿ ಸೂರ್ಯ ಹೇಳಿಕೆ: ವಾಟಾಳ್ ನಾಗರಾಜ್ ಆಕ್ರೋಶ

Tejasvi Surya should resign immediately: Vatal Nagaraj
Photo Credit : News Kannada

ನಂಜನಗೂಡು: ತೇಜಸ್ವಿ ಸೂರ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ರೈತರ ಸಾಲ ಮನ್ನಾ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಅವರು ಈ ಹಿಂದೆ ಅನಂತಕುಮಾರ್ ಅವರು ಸಂಸದರಾಗಿದ್ದರು ಅವರದ್ದು ಸರಳ ವ್ಯಕ್ತಿತ್ವ.  ಆದರೆ ತೇಜಸ್ವಿ ಹಾಗಿಲ್ಲ.  ತೇಜಸ್ವಿ ಸೂರ್ಯ ಇದೊಂದೇ ವಿಚಾರವಲ್ಲ. ಎಲ್ಲ ವಿಚಾರದಲ್ಲೂ ಮೂಗುತೂರಿಸುತ್ತಾರೆ .  ಇದು ಅತ್ಯಂತ ಖಂಡನಾರ್ಹ.  ಅವರಿಗೆ ಲೋಕಸಭಾ ಸದಸ್ಯರಾಗಲು ಯೋಗ್ಯತೆ ಇಲ್ಲ, ಗೌರವ ಇಲ್ಲ, ನಿಮಗೆ ಮಾತನಾಡುವುದು ಬಿಟ್ಟರೆ ಯಾವುದು ಗೊತ್ತಿಲ್ಲ. ತೇಜಸ್ವಿ ಸೂರ್ಯ ಬಾಯಿಗೆ ಬಂದಂತೆ ಮಾತನಾಡಬಾರದು. ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು