ನಂಜನಗೂಡು: ತೇಜಸ್ವಿ ಸೂರ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ರೈತರ ಸಾಲ ಮನ್ನಾ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು ಈ ಹಿಂದೆ ಅನಂತಕುಮಾರ್ ಅವರು ಸಂಸದರಾಗಿದ್ದರು ಅವರದ್ದು ಸರಳ ವ್ಯಕ್ತಿತ್ವ. ಆದರೆ ತೇಜಸ್ವಿ ಹಾಗಿಲ್ಲ. ತೇಜಸ್ವಿ ಸೂರ್ಯ ಇದೊಂದೇ ವಿಚಾರವಲ್ಲ. ಎಲ್ಲ ವಿಚಾರದಲ್ಲೂ ಮೂಗುತೂರಿಸುತ್ತಾರೆ . ಇದು ಅತ್ಯಂತ ಖಂಡನಾರ್ಹ. ಅವರಿಗೆ ಲೋಕಸಭಾ ಸದಸ್ಯರಾಗಲು ಯೋಗ್ಯತೆ ಇಲ್ಲ, ಗೌರವ ಇಲ್ಲ, ನಿಮಗೆ ಮಾತನಾಡುವುದು ಬಿಟ್ಟರೆ ಯಾವುದು ಗೊತ್ತಿಲ್ಲ. ತೇಜಸ್ವಿ ಸೂರ್ಯ ಬಾಯಿಗೆ ಬಂದಂತೆ ಮಾತನಾಡಬಾರದು. ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.