ನಂಜನಗೂಡು: ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಸಂಗಮ ಕ್ಷೇತ್ರದ ಶ್ರೀ ಮಹದೇವ ತಾತ ಗದ್ದುಗೆ ಪೂಜೆಗೆ ಬಂದ ಮಹಿಳೆ ಕಪಿಲಾ ನದಿಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಪೂಜೆಗೆ ತೆರಳುವ ಮುನ್ನ ಕಾಲು ತೊಳೆಯಲು ನದಿಗೆ ಇಳಿದಾಗ ದುರ್ಘಟನೆ ನಡೆದಿದೆ. ಹುಳಿಮಾವು ಗ್ರಾಮದ ನಂಜಪ್ಪ ಸ್ವಾಮಿ ಎಂಬವರ ಪತ್ನಿ ಶಕುಂತಲಾ (46)ಮೃತ ಮಹಿಳೆ. ನಂಜನಗೂಡು ತಾಲ್ಲೂಕಿನ ಚಂದ್ರವಾಡಿ ಗ್ರಾಮದಿಂದ ಹುಳಿಮಾವು ಗ್ರಾಮಕ್ಕೆ ವಿವಾಹವಾಗಿದ್ದರು.
ನೆನ್ನೆ ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಮಹದೇವ ತಾತ ಗದ್ದಿಗೆ ಪೂಜಿ ಸಲ್ಲಿಸಲು ಕುಟುಂಬ ಸಮೇತ ಬಂದಿದ್ದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.