ಮೈಸೂರು: ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ಪ್ರಸ್ತಾಪವೇ ಇಲ್ಲ. ಇದು ಕಾಂಗ್ರೆಸ್ ಕೃಪಾಘೋಷಿತ ನಾಟಕ ಮಂಡಳಿ ಸೃಷ್ಠಿಸಿದ ಸುಳ್ಳು ಎಂದು ಕಾಂಗ್ರೆಸ್ ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದ್ದಾರೆ.
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷ ಆಡಳಿತವನ್ನು ಕರ್ನಾಟಕ ಜನ ಮೆಚ್ಚುವಂತ ಜನಪರ ಆಡಳಿತವನ್ನು ಕೊಟ್ಟಿದ್ದಾರೆ. ಒಂದೇ ಒಂದು ಸಣ್ಣ ಅಪಾನೆ ಇಲ್ಲದ ಮುಖ್ಯಮಂತ್ರಿ ಮೇಲೆ ಕಾಂಗ್ರೆಸ್ ಸುಳ್ಳು ಸುದ್ದಿ ಹರಡುತ್ತಿದೆ.
ಸಿದ್ದರಾಮೋತ್ಸವದಿಂದ ಸಣ್ಣ ಕಿಡಿ ಬೃಹದಾಕಾರವಾಗಿ ಬೆಳೆದಿದೆ. ಅದನ್ನು ಮುಚ್ಚಿಕೊಳ್ಳಲು ಬಸವರಾಜ ಬೊಮ್ಮಾಯಿ ಬೆನ್ನಿಗೆ ಮೂರನೇ ಮುಖ್ಯಮಂತ್ರಿ ಬರ್ತಾರೆ ಎಂದು ಹೇಳುತ್ತಿರುವುದು ನೂರಕ್ಕೆ ನೂರು ‘ ಕಾಂಗ್ರೆಸ್ ಕೃಪಾಘೋಷಿತ ನಾಟಕ ಮಂಡಳಿ ಸೃಷ್ಠಿಸಿದ ಸುಳ್ಳು’ ಎಂದು ಕಿಡಿಕಾರಿದ್ದಾರೆ.