ಮೈಸೂರು: ಬಡವರ ಮೇಲೆ ಹೊರೆಯಾದ ಛಾಪ ಕಾಗದ (ಬಾಂಡ್ ಪೇಪರ್ ) ದರ ಹೆಚ್ಚಳ ಮಾಡಿದ್ದು ಸರ್ಕಾರ ಕೂಡಲೇ ಹೊಸದರವನ್ನು ಹಿಂಪಡೆದು, ಹಳೆ ದರದ ಪದ್ಧತಿಯನ್ನು ಮುಂದುವರೆಸಿ ಅಗ್ಗದರದಲ್ಲಿ ಸಿಗುವ ಹಾಗೆ ಚಾಪಾಕಾಗದ (ಬಾಂಡ್ ಪೇಪರ್ ) ವ್ಯವಸ್ಥೆ ಮಾಡಬೇಕು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ನಡೆದ ಗ್ರಾಹಕರ ಹಿತರಕ್ಷಣ ಸಭೆಯಲ್ಲಿ ಸರ್ಕಾರದ ಛಾಪಾಕಾಗದ ಪರಿಷ್ಕೃತ ದರವನ್ನು ಹಿಂಪಡೆಯುವಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು ಬಳಿಕ ಮಾತನಾಡಿದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಅವರು, ರೈತರು, ಶಾಲಾ ಮಕ್ಕಳು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಸೇರಿದಂತೆ ಎಲ್ಲರೂ ಕರಾರು ಪತ್ರ, ಕೋರ್ಟ್ ಅಫಿಡವಿಟ್, ಜಾತಿ ಪ್ರಮಾಣ ಪತ್ರ ಸಣ್ಣ ಹಿಡಿವಳಿದಾರರ ಪ್ರಮಾಣ ಪತ್ರ ಹೀಗೆ ಹಲವು ಕೆಲಸಗಳಿಗೆ 20, 50, 100, ರೂಪಾಯಿ ದರದಲ್ಲಿ ಚಾಪಾ ಕಾಗದ ಪತ್ರ (ಬಾಂಡ್ ಪೇಪರ್) ಸಿಗುತ್ತಿದ್ದವು.
ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಈಗ ಮಾಡಿರುವ ನೂತನ. ದರ 100, 500, ಮುಖಬೆಲೆಯ ಚಾಪಾ ಕಾಗದ ಪತ್ರಗಳಿಂದ ಹೆಚ್ಚಿನ ಹೊರೆಯಾಗಿದೆ. 10ಪಟ್ಟು ಏರಿಕೆ ಮಾಡಿದ್ದು ಸರಿಯಲ್ಲ. ಈ ದರವನ್ನು ಸರ್ಕಾರ ಏಕಾಏಕಿ ಇಷ್ಟೊಂದು ಮಟ್ಟದಲ್ಲಿ ಏರಿಕೆ ಮಾಡಿರುವುದು ಪ್ರಥಮ ಬಾರಿಗೆ. ಇಷ್ಟೊಂದು ಹೆಚ್ಚಿನ ದರದಲ್ಲಿ ಚಾಪಾ ಕಾಗದ ಪತ್ರ (ಬಾಂಡ್ ಪೇಪರ್) ಮಾಡಿರುವುದು ಸರಿಯಲ್ಲ. ಬಡವರ ಮೇಲೆ ಹೊರೆಯಾಗುತ್ತದೆ. ತಕ್ಷಣವೇ ಹಳೆಯ ದರ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಗ್ರಾಹಕರ ಹಿತ ದೃಷ್ಟಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಚಾಲಕರಾದ ದಯಾನಂದ್, ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ಸತೀಶ್, ಮೈಲಾ ವಿಜಯ್ ಕುಮಾರ್, ನಂಜುಂಡ, ಸರ್ವಮಂಗಳ, ಭಾಗ್ಯಶ್ರೀ ಹಾಗೂ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.