ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆಯಲ್ಲಿನ ಸೂಕ್ಷ್ಮ ಅಪರೂಪ ಮತ್ತು ವಿನಾಶದ ಅಂಚಿನಲ್ಲಿರುವ ಪ್ರಾಣಿ ಪಕ್ಷಿಗಳು ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಮೃಗಾಲಯದ ವೀಕ್ಷಕರು, ಸಾರ್ವಜನಿಕರ ಸುರಕ್ಷಿತ ಹಿತದೃಷ್ಟಿಯಿಂದ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿ ಕರೆಯ ಸುತ್ತಮುತ್ತಲಿನ ರಸ್ತೆಗಳನ್ನು ನಿಶ್ಯಬ್ದ ವಲಯ ಎಂದು ಘೋಷಿಸಲಾಗಿದೆ.
ಎಂ.ಎಲ್ ಸೋಮಸುಂದರಂ ವೃತ್ತದಿಂದ ಎಸ್.ಲಿಂಗಣ್ಣ ವೃತ್ತದವರೆಗಿನ ಶಾಲಿವಾಹನ ರಸ್ತೆ, ಎಸ್.ಲಿಂಗಣ್ಣ ವೃತದಿಂದ ಸರ್ಕಸ್ ಗ್ರೌಂಡ್ ಜಂಕ್ಷನ್ವರೆಗಿನ ಲೋಕರಂಜನ್ ರಸ್ತೆ, ಸರ್ಕಸ್ ಗ್ರೌಂಡ್ ಜಂಕ್ಷನ್ ನಿಂದ ಮಹಾರಾಣಾ ಪ್ರತಾಪ ಸಿಂಹ ವೃತ್ತದ ವರೆಗಿನ ಟ್ಯಾಂಕ್ ಬಂಡ್ ರಸ್ತೆ, ಮಹಾರಾಣಾ ಪ್ರತಾಪಸಿಂಹ ವೃತದಿಂದ ಎಂ.ಎಲ್.ಸೋಮಸುಂದರಂ ವೃತ್ತದವರೆಗಿನ ಎಂ.ಜಿ ರಸ್ತೆಗಳನ್ನು ನಿಶ್ಯಬ್ದ ವಲಯ ಎಂದು ಘೋಷಿಸಿ, ರಸ್ತೆಗಳಲ್ಲಿ ಪಟಾಕಿ ಶಬ್ದ, ಧ್ವನಿವರ್ಧಕ ಶಬ್ದ ಹಾಗೂ ವಾಹನಗಳ ಹಾರ್ನ್ ಶಬ್ದಗಳನ್ನು ನಿಷೇಧಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್.ಬಿ ತಿಳಿಸಿದ್ದಾರೆ.