ಸರಗೂರು: ತಾಲೂಕಿನಲ್ಲಿ ರಸ್ತೆ ಅಪಘಾತದಲ್ಲಿನ ಸಾವುಗಳು ಹೆಚ್ಚಿನ ರೀತಿಯಲ್ಲಿ ಆಗುತ್ತಿರುವುದನ್ನು ಗಮನಿಸಿ, ಸರಗೂರು ತಾಲೂಕಿನ ನಾಲ್ಕು ತೀವ್ರ ಅಪಘಾತ ಸ್ಥಳಗಳಲ್ಲಿ ರಸ್ತೆಯ ಸಂಪೂರ್ಣ ದೃಶ್ಯ ಚಾಲಕರಿಗೆ ದೊರಕುವಂತೆ ಮಾಡಿ ಅಪಘಾತಗಳನ್ನು ತಡೆಯಲು ರಸ್ತೆಯಲ್ಲಿ 32 ಇಂಚು ಅಳತೆಯುಳ್ಳ ಕಾನ್ ವೆಕ್ಸ್ ಕನ್ನಡಿಗಳನ್ನು( ಕನ್ವೆಕ್ಸ್ ಮಿರರ್)ಗಳನ್ನು ಅಳವಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬಿ.ಹೆಚ್.ಎನ್ ಚತುರ್ಮುಖ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎನ್.ಸಂತೋಷ್ ಕುಮಾರ್ ಅವರು, ತಾಲೂಕಿನ ಬಿ ಮಟಕೆರೆಯಲ್ಲಿನ ಬಿ ಹೆಚ್ ಎನ್ ಚತುರ್ಮುಖ ಎಜುಕೇಷ ನ್ ಟ್ರಸ್ಟ್ ವತಿಯಿಂದ ನಾಲ್ಕು ಕಡೆ ಕನ್ನಡಿಗಳನ್ನು ಅಳವಡಿಸಲು ತೀರ್ಮಾನಿಸಲಾಯಿತು, ಅವರು ಅಪಘಾತ ಸ್ಥಳಗಳಲ್ಲಿ ರಸ್ತೆಯ ಸಂಪೂರ್ಣ ದೃಶ್ಯ ಚಾಲಕರುಗಳಿಗೆ ಕಾಣಿಸಬೇಕೆಂಬ ಉದ್ದೇಶದಿಂದ ಕಾನ್ ವೆಕ್ಸ್ ಕನ್ನಡಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಟ್ರಸ್ಟ್ ನ ಅಧ್ಯಕ್ಷ ಬಿ ಹೆಚ್ ನಂಜಪ್ಪ, ಮಾತನಾಡಿ, ಬಿ ಮಟಕೆರೆ ಗ್ರಾಮ ಪಂಚಾಯಿತಿಯ ಶಾಂತಿನಿವಾಸ ಗ್ರಾಮದ ತಿರುವು, ಮತ್ತು ಸರಗೂರು ಬಿದರಳ್ಳಿ ರಸ್ತೆಯ ಸಾಗರೆ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಇರುವ ತಿರುವು, ಸೇತುವೆ ಬಳಿ ಸರಗೂರು ಪೊಲೀಸ್ ಠಾಣೆಯ ಮುಂಭಾಗ ತಿರುಗಾಡುವ ತಿರುವು ಹಾಗೂ ಸರಗೂರಿನ ನಾಮಧಾರಿಗೌಡ ಸಮುದಾಯ ಭವನ ಬಳಿ ಕೆಇಬಿ ಕಚೇರಿ ಮುಂಭಾಗ ಕನ್ನಡಿ ಅಳವಡಿಸಲಾಗಿದೆ ಎಂದು ತಿಳಿಸಿದರು.