ಸರಗೂರು: ಇಲ್ಲಿನ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಆಮ್ ಆದ್ಮಿ ಪಕ್ಷಕ್ಕೆ ಹತ್ತು ವರ್ಷ ತುಂಬಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಸಂವಿಧಾನ ದಿನದ ಆಚರಣೆಯನ್ನು ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ಸರಗೂರು ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಮಾಡಲಾಯಿತು.
ಸಂವಿಧಾನ ದಿನದ ಆಚರಣೆ ಪ್ರಯುಕ್ತ ಸಂವಿಧಾನ ಮತ್ತು ರಾಜಕೀಯ ಅಧ್ಯಯನ ಪುಸ್ತಕ ಸೇರಿದಂತೆ ಸಂವಿಧಾನದ ಜ್ಞಾನವನ್ನು ನೀಡಬಲ್ಲ ಪುಸ್ತಕಗಳ ಜೊತೆಗೆ ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಅನುಕೂಲವಾಗುವ ಪೊಲೀಸ್, ಪಿ.ಎಸ್.ಐ. ಅಭ್ಯರ್ಥಿಗಳಿಗೆ ಅನುಕೂಲವಾಗುವ ಚಿಗುರು, ಸ್ಪೋಕನ್ ಇಂಗ್ಲೀಷ್, ಕನ್ನಡ ಇಂಗ್ಲಿಷ್ ಅನುವಾದ ಪುಸ್ತಕ, ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಕನ್ನಡ ವ್ಯಾಕರಣ, ಇತಿಹಾಸ, ಭಾರತ ಸಂವಿಧಾನ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಪುಸ್ತಕಗಳು, ಅಬ್ದುಲ್ ಕಲಾಂ ರವರ ಟರ್ನಿಂಗ್ ಪಾಯಿಂಟ್, ಭೂಗೋಳಶಾಸ್ತ್ರ ಹಾಗೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್, ಸ್ಟ್ಯಾಂಡರ್ಡ್ ಇಂಗ್ಲಿಷ್ ಡಿಕ್ಷನರಿ ಹಾಗೂ ಹಲವಾರು ಬಗೆಯ ನೂರಾರು ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಎಎಪಿಗೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯತ್ವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ನೋಂದಣಿ ಮಾಡಿಕೊಳ್ಳಲಾಯಿತು. ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮತದಾರರು ಆಮ್ ಆದ್ಮಿ ಪಕ್ಷವನ್ನು ಸೇರಲು ಹಾಗೂ ಬೆಂಬಲಿಸಲು ಇಚ್ಚಿಸುವವರು 7065055757 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಕ್ಷವನ್ನು ಬೆಂಬಲಿಸಬಹುದಾಗಿದೆ ಎಂದು ಇದೇ ಸಂದರ್ಭದಲ್ಲಿ ನಂಬರನ್ನು ಕೂಡ ಬಿಡುಗಡೆ ಮಾಡಲಾಯಿತು. ಮುಂದುವರಿದು ಪಕ್ಷದ ಸದಸ್ಯತ್ವ ಅಭಿಯಾನವನ್ನು ಸಂಜೆ 6 ಗಂಟೆಯವರೆಗೂ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ಸಂಯೋಜಕ ಹೊಸ ಬಿರುವಾಳ್ ಗ್ರಾಮೀಣ ಮಹೇಶ್, ಸರಗೂರು ಕೃಷ್ಣ, ಸರಗೂರು ಶ್ರೀ ಚಾಮುಂಡೇಶ್ವರಿ ಆಟೋ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಚಾಲಕರು, ಪಕ್ಷದ ಕಾರ್ಯಕರ್ತರಾದ ನಾಗರಾಜು, ಜವರಪ್ಪ, ದಿವ್ಯ ನಾಥನ್, ಸ್ವಾಮಿಗೌಡ, ಮಹದೇವಸ್ವಾಮಿ, ಮಣಿಕಂಠ ವಿಶ್ವಕರ್ಮ, ಮಹೇಶ್ ಸರಗೂರು, ಪ್ರಭು, ವಿಶ್ವ, ಮೂರ್ತಿ ಹಾಗೂ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.