News Karnataka Kannada
Tuesday, May 07 2024
ಮೈಸೂರು

ಮೈಸೂರಲ್ಲಿ ದಾಖಲೆಯಿಲ್ಲದ 2.32 ಕೋಟಿ ರೂ. ನಗದು, 2.83 ಲಕ್ಷ ಲೀಟರ್ ಮದ್ಯ ವಶ

Rs 2.32 crore seized in Mysuru
Photo Credit : By Author

ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ದಾಖಲೆ ಇಲ್ಲದ 2.32 ಕೋಟಿ ರೂ. ನಗದು, 9.04 ಕೋಟಿ ಮೌಲ್ಯದ 2.83 ಲಕ್ಷ ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಮಾದಕ ಮತ್ತು ನಶೆಯನ್ನುಂಟು ಮಾಡುವ 7.54 ಲಕ್ಷ ಮೌಲ್ಯದ 22.187 ಕೆಜಿ ತೂಕದ ವಸ್ತು, 21.51 ಲಕ್ಷ ಮೌಲ್ಯದ ಇತರೆ ಸಾಮಗ್ರಿ ಹಾಗೂ 60 ಸಾವಿರ ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಸಿ ವಿಜಿಲ್ ಮೂಲಕ ಒಟ್ಟು 120 ಪ್ರಕರಣ ದಾಖಲಾಗಿದೆ. 2018ರಲ್ಲಿ ಒಟ್ಟು 2905 ಮತಗಟ್ಟೆ ಪೈಕಿ 1199 ಮತಗಟ್ಟೆಗಳಲ್ಲಿ ರಾಜ್ಯದ ಮತದಾನದ ಸರಾಸರಿಗಿಂತ ಕಡಿಮೆ ಮತದಾನ ಆಗಿದೆ. ಈ ಪೈಕಿ 303 ಗ್ರಾಮೀಣ ಮತಗಟ್ಟೆಗಳು ಮತ್ತು 896 ನಗರ ಪ್ರದೇಶದ ಮತಗಟ್ಟೆಗಳು ಇವೆ ಎಂದು ಹೇಳಿದರು.

ಮತದಾನವನ್ನು ಶೇಖಡವಾರು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಐಕಾನ್ ಜಾವಗಲ್ ಶ್ರೀನಾಥ್, ಅಂಗವಿಕಲ ರಾಷ್ಟ್ರೀಯ ಕ್ರೀಡಾಪಟು ಮಹೇಂದ್ರ ಅವರನ್ನು ಐಕಾನ್ ಆಗಿ ನೇಮಿಸಿಕೊಂಡಿದ್ದು, ಅವರು ಜಾಗೃತಿ ಮೂಡಿಸುವರು. ಜಿಲ್ಲಾ ಮಟ್ಟದಲ್ಲಿ ಯುವ ಮತದಾರರ ಮೂಲಕ ಕ್ಯಾಂಡಲ್ ಲೈಟ್ ಜಾಥಾ ನಡೆಸಲಾಗಿದೆ. ಈ ಜಾಥಾದಲ್ಲಿ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಜಿಪಂ ಸಿಇಒ ಇದ್ದಾರೆ ಎಂದರು.

ಜಿಲ್ಲಾ ಮಟ್ಟದಲ್ಲಿ ಕಡಿಮೆ ಮತದಾನ ಆದ ಮತಗಟ್ಟೆಗಳಿಗೆ ಬಿಎಲ್‌ಒ ಮತ್ತು ತಂಡಗಳು ಭೇಟಿ ನೀಡಿ ಮತದಾನದ ಶೇಖಡವಾರು ಪ್ರಮಾಣ ಹೆಚ್ಚಿಸಲು ಮನೆಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸುವರು. ಜಿಲ್ಲೆಯಲ್ಲಿ ಒಟ್ಟು 41 ಶಾಲಾ ಚಿತ್ರಕಲಾ ಶಿಕ್ಷಕರನ್ನು ಗುರುತಿಸಿ ಅವರ ಮೂಲಕ ಮತದಾನ ಕೇಂದ್ರಗಳನ್ನು ಆಕರ್ಷಣೆಗೊಳಿಸಲಾಗುತ್ತಿದೆ. ತೃತೀಯ ಲಿಂಗಿಗಳನ್ನು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವಂತೆ ಮಾಡುವುದು ನಮ್ಮ ಉದ್ದೇಶ. ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಮತದಾನದ ಪ್ರತಿಜ್ಞಾ ವಿಧಿ ಬೋಧಿಸಬೇಕು. ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಂಚೆ ಮೂಲಕ ಮತದಾನ ಮಾಡಲು ಪ್ರೇರೇಪಿಸುವುದು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಜಾಗೃತಿ, ಪಿರಿಯಾಪಟ್ಟಣದಲ್ಲಿ ಕಸ ಸಂಗ್ರಹಿಸುವ ವಾಹನದ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 97 ವಿಶೇಷ ಮತಗಟ್ಟೆಗಳನ್ನು ಆಯ್ಕೆ ಮಾಡಿದ್ದು, ಈ ಪೈಕಿ 55 ಸಖಿ ಬೂತ್‌ಗಳು, 11 ಪಿಡಬ್ಲ್ಯೂಡಿ ಬೂತ್, 11 ಯುವ ಮತದಾರರ ಬತ್, 1- ಥೀಮ್ ಬೇಸ್ ಬೂತ್, 10 ಎತ್ನಿಕ್ ಬೂತ್ ಎಂದು ಗುರುತಿಸಲಾಗಿದೆ. ಥೀಮ್ ಬೇಸ್ ಬೂತ್‌ನಲ್ಲಿ ಮೈಸೂರು ಜಿಲ್ಲೆಯ ಪಾರಂಪರಿಕತೆ ಬಿಂಬಿಸುವ ಮತಗಟ್ಟೆ, ಸಾಂಸ್ಕೃತಿಕ ನಗರ ಮೈಸೂರನ್ನು ಪ್ರತಿಬಿಂಬಿಸುವ ಮತಗಟ್ಟೆಗಳು, ಅರಮನೆ, ಮೃಗಾಲಯ, ಲಲಿತಮಹಲ್ ಅರಮನೆ, ಜಗನ್ಮೋಹನ ಅರಮನೆ ಮುಂತಾದವನ್ನು ಪ್ರತಿಬಿಂಬಿಸುವ ಬೂತ್‌ಗಳು, ಆಯಾ ತಾಲೂಕಿನ ಸ್ಥಳೀಯ ಆಕರ್ಷಣೀಯ ಸ್ಥಳಗಳನ್ನು ಪ್ರತಿಬಿಂಬಿಸುವ ಬೂತ್ ಇದೆ.

ಎತ್ನಿಕ್ ಬೂತ್‌ನಲ್ಲಿ ಮತದಾನದ ದಿನದಂದು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಯು ಗಿರಿಜನ ಹಾಡಿ ಆದಿವಾಸಿಗಳ ಉಡುಗೆ ತೊಟ್ಟು ಮತದಾರರನ್ನು ಆರ್ಷಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು