ನಂಜನಗೂಡು: ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು.
ದೇವಾಲಯದ ದಾಸೋಹ ಭವನದಲ್ಲಿ 34 ಹುಂಡಿಗಳ ಹಣವನ್ನು ಎಣಿಕೆ ಮಾಡಲಾಯಿತು.
ಒಂದು ಕೋಟಿ 55 ಲಕ್ಷದ 103 ರೂಪಾಯಿ ನಗದು ಸಂಗ್ರಹವಾಗಿದ್ದು, 132 ಗ್ರಾಂ 500 ಮಿಲಿ ಗ್ರಾಂ, ಚಿನ್ನ, 3 ಕೆಜಿ 750 ಗ್ರಾಂ ಬೆಳ್ಳಿ, 25 ವಿದೇಶಿ ಕರೆನ್ಸಿ, ನಂಜುಂಡನಿಗೆ ಕಾಣಿಕೆಯಾಗಿ ಬಂದಿದೆ.
ನಿಷೇಧಿತ ಎರಡು ಸಾವಿರ ನೋಟುಗಳು ಬಂದಿದ್ದು, ಸುಮಾರು 1 ಲಕ್ಷದ 48 ಸಾವಿರ ನೋಟುಗಳು ಕಂಡು ಬಂದಿದೆ.
ಈ ಸಂದರ್ಭದಲ್ಲಿ ಇಒ ಜಗದೀಶ್ ಕುಮಾರ್, ಎಇಒ ವೆಂಕಟೇಶ್ ಪ್ರಸಾದ್, ಖಾತೆ ಅಧೀಕ್ಷಕ ಗುರುಮಲ್ಲಯ್ಯ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಲಕ್ಷ್ಮಿ ಹಾಗೂ ದೇವಾಲಯದ ಸಿಬ್ಬಂದಿಗಳು, ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.