ಹುಬ್ಬಳ್ಳಿ: ನಾವು ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಸೋತಿರಬಹುದು ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಈ ಗೆಲುವನ್ನು ಬಹುಶಃ ದೆಹಲಿಯಲ್ಲಿ ಕುಳಿತಿರುವವರು ನಿರೀಕ್ಷೆ ಮಾಡಿರಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಆತ್ಮವಾಲೋಕ ಸಭೆಯಲ್ಲಿ ಮಾತನಾಡಿದ ಅವರು,ಜನ ಮನಸ್ಸು ಮಾಡಿದರು ಏನು ಬೇಕಾದರೂ ಮಾಡಬಹುದು ಅಂತ ತೋರಿಸಿದ್ದಾರೆ. ದೆಹಲಿಯಲ್ಲಿ ಕುಳಿತವರಿಗೆ ಈಗ ಅರ್ಥವಾಗಿದೆ. .ಕೆಲವರು ನಾನು ಸೋತ್ರೆ ಡಿಪ್ರೆಶನ್ ಹೋಗುತ್ತೆ ಅಂತ ಹೇಳಿದ್ದರು.
ನಾನು ಬೇರೆಯವರಿಗೆ ಡಿಪ್ರೆಶನ್ ಹೋಗುವಂತೆ ಮಾಡುತ್ತೆನೆ ಹೊರತು, ನಾನು ಯಾವತ್ತೂ ಡಿಪ್ರೆಶನ್ ಗೆ ಹೋಗಲ್ಲ. ನನ್ನನ್ನು ಡಿಪ್ರೆಶನ್ ಹೋಗುವಂತೆ ಮಾಡಲು ಹೋದವರು ಈಗ ಎಲ್ಲಿ ಸೋಲು ಅಂತಿಮವಲ್ಲಾ.. ಮತ್ತೆ ಪುಟಿದು ಬರಬೇಕು. ದೇವೆಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಸೋತು ಗೆದ್ದವರೇ. ಸೋಲಿನಿಂದ ಎದೆಗುಂದಬೇಕಿಲ್ಲ, ಮುಂದಿನ ಚುನಾವಣೆಯಲ್ಲಿ ಎದ್ದು ಬರೋಣ ಎಂದರು.