News Karnataka Kannada
Tuesday, May 07 2024
ಮೈಸೂರು

ಹುಲ್ಲಹಳ್ಳಿ ಪೊಲೀಸ್ ಠಾಣೆ ಎದುರು ಸಾರ್ವಜನಿಕರ ಪ್ರತಿಭಟನೆ

Public protest in front of Hullahalli police station
Photo Credit : News Kannada

ನಂಜನಗೂಡು: ಕಳ್ಳತನ ಮಾಡುತ್ತಿದ್ದವರನ್ನು ಹಿಡಿದು ಪೊಲೀಸರ ವಶದಲ್ಲಿದ್ದ ಕಳ್ಳರನ್ನು ಬಿಟ್ಟು ದೌರ್ಜನ್ಯವೆಸುತ್ತಿದ್ದಾರೆ ಎಂದು ಆರೋಪಿಸಿ ಹುಲ್ಲಹಳ್ಳಿ ಪೊಲೀಸ್ ಠಾಣೆ ಎದುರು ಸಾರ್ವಜನಿಕರು ಪ್ರತಿಭಟಿಸಿದರು.

ದುಗ್ಗಳ್ಳಿ ಗ್ರಾಮದಲ್ಲಿ ರಾತ್ತಿ 11ರ ಸಮಯದಲ್ಲಿ ಮಲ್ಲಪ್ಪ, ಕುಮಾರ, ಉಮೇಶ್ ಎಂಬುವರ ಜಮೀನುಗಳಲ್ಲಿ ಮೋಟಾರ್ ಕೇಬಲ್, ಲ್ಯಾಟರ್ ವೈರ್  ಕ ದಿಯುವ ಸಂದರ್ಭದಲ್ಲಿ ಜಮೀನಿನ ರೈತರು ಕಳ್ಳರನ್ನು ಹಿಡಿದಿದ್ದಾರೆ.

ಕೆಎ ೧೦-೧೩೯೦ ಆಪೇ ಆಟೋದೊಂದಿಗೆ ಇಬ್ಬರು ಕಳ್ಳರನ್ನು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಕರೆದು ತಂದು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಪೊಲೀಸರು ಯಾವುದೇ ಪ್ರಕರಣ ದಾಖಲಿಸದೇ ಕಳ್ಳರನ್ನು ಬಿಟ್ಟು ದೂರು ದಾಖಲಿಸುವ ರೈತರ ಮೇಲೆ ಥಳಿಸಿದ್ದಾರೆ ಎಂದು ಆರೋಪಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಹಿಡಿದು ತಂದ ಖದೀಮರನ್ನು ಬಿಟ್ಟು ಪರೋಷವಾಗಿ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ. ನ್ಯಾಯ ಕೇಳುವ ರೈತರ ಮೇಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸಬೇಕು ಎಂದು ರೈತ ಮಂಜುನಾಥ್ ಮನವಿ‌ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು