ಮೈಸೂರು: ಮೈಸೂರಿನ ಪ್ರವಾಸಿ ತಾಣಗಳನ್ನು ಏಪ್ರಿಲ್ 26 ರಂದು ಬಂದ್ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಆ ಮೂಲಕ ಮತದಾನದ ಮೂಲಕ ಮತಚಲಾಯಿಸದೆ ಟ್ರಿಪ್ ಹೋಗುವವರಿಗೆ ಶಾಕ್ ನೀಡಲಾಗಿದೆ.
ಮತ್ತೊಂದೆಡೆ 14 ಕ್ಷೇತ್ರಗಳ ಪ್ರವಾಸಿಗರ ಪೈಕಿ ಮತಚಲಾಯಿಸಿದವರಿಗೆ ಮಾತ್ರ ಮೈಸೂರು ಅರಮನೆಗೆ ಪ್ರವೇಶ ನೀಡಲು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತೀರ್ಮಾನ ಮಾಡಿದ್ದಾರೆ.
ಈ ಬಾರಿ ಮತದಾನ ದಿನ ಸೇರಿದಂತೆ ಮೂರು ದಿನ ರಜೆಯಿರುವ ಕಾರಣದಿಂದ ಕೆಲವರು ಮತದಾನ ಮಾಡದೆ ಟ್ರಿಪ್ ಹೋಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಿ ಎಲ್ಲರೂ ಮತದಾನ ಮಾಡುವಂತೆ ಮಾಡುವ ಕಾರ್ಯವನ್ನು ಚುನಾವಣಾ ಆಯೋಗ ಮಾಡುತ್ತಿದೆ. ಒಂದು ವೇಳೆ ಜನ ಪ್ರವಾಸ ತೆರಳಿದರೆ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಹೆಚ್ಚಾಗಿದೆ. ಇದನ್ನು ತಡೆಯುವುದು ಅನಿವಾರ್ಯವಾಗಿದೆ.
ಮತದಾನದ ದಿನ ಶುಕ್ರವಾರವಾಗಿದ್ದರಿಂದ ಅಂದು ರಜೆ ಇದೆ. ಜತೆಗೆ ವಾರಾಂತ್ಯದ ಶನಿವಾರ, ಭಾನುವಾರವೂ ರಜೆಯಾದ್ದರಿಂದ ಮತದಾರರು ಪ್ರವಾಸಕ್ಕೆ ಯೋಜನೆ ಹಾಕಿಕೊಂಡು ತೆರಳಿದರೆ ಮತದಾನದ ಮೇಲೆ ಪರಿಣಾಮ ಬೀರಲಿದೆ. ಸದ್ಯ ಮೈಸೂರಿನಲ್ಲಿ ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.