ನಂಜನಗೂಡು: ಕೆಎಸ್ಆರ್ ಟಿಸಿ ಬಸ್ ಸ್ಟೇರಿಂಗ್ ಕಟ್ಟಾಗಿ ಕಂದಕಕ್ಕೆ ಸಾರಿಗೆ ಬಸ್ ನುಗ್ಗಿರುವ ಘಟನೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದ ಬಳಿ ನಡೆದಿದೆ.
ನಂಜನಗೂಡಿನಿಂದ ಕಸುವಿನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಸಾರಿಗೆ ಬಸ್, ಮುದ್ದಹಳ್ಳಿ ಮತ್ತು ನವಿಲೂರು ಗ್ರಾಮಗಳ ಮುಖ್ಯರಸ್ತೆಯ ನವಿಲೂರು ಗ್ರಾಮದ ತಿರುವಿನಲ್ಲಿ ಸ್ಟೇರಿಂಗ್ ಕಟ್ಟಾಗಿ, ನಿಂತಿದ್ದ ಬೈಕಿಗೆ ಡಿಕ್ಕಿ ಹೊಡೆದು ಕಂದಕಕ್ಕೆ ನುಗ್ಗಿದೆ.
ಬೈಕ್ ಬಸ್ ಚಕ್ರದ ಕೆಳಗೆ ಸಿಲುಕಿ ಜಖಂ ಗೊಂಡಿದೆ. ಬಸ್ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾರಿಗೆ ಬಸ್ ಗಳನ್ನು ಸರಿಯಾಗಿ ಸರ್ವಿಸ್ ಮಾಡದೆ ಹಳೆಯದಾದ ಬಸ್ ಗಳನ್ನೇ ಸಂಚಾರಕ್ಕೆ ಬಿಟ್ಟಿರುವುದು ಸಾರಿಗೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ.
ಗ್ರಾಮಾಂತರ ಪ್ರದೇಶಕ್ಕೆ ಬರುವ ಸಾರಿಗೆ ಬಸ್ ಗಳನ್ನು ರಿಪೇರಿ ಮಾಡಿ, ಹೊಸ ಬಸ್ ಗಳನ್ನು ಬಿಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.