ನಂಜನಗೂಡು: ತಾಲ್ಲೂಕಿನ ಹಲ್ಲರೆ ಗ್ರಾಪಂ ಪಿಡಿಒ ವರದರಾಜು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ .
ಖಾಲಿ ನಿವೇಶನದ ಇ – ಸ್ವತ್ತು ಮಾಡಿಕೊಡುವ ಸಂಬಂಧ ಹಲ್ಲರೆ ಗ್ರಾಮದ ಅತಿಕ್ ಉರ್ ರೆಹಮಾನ್ ಎಂಬವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ನಿರಾಕರಿಸಿದ್ದ ರೆಹಮಾನ್ , ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಅದರಂತೆ ನಂಜನಗೂಡಿನ ಡಿಎಂಜೆ ಕಾಂಪ್ಲೆಕ್ಸ್ನಲ್ಲಿ 30 ಸಾವಿರ ರೂ. ಲಂಚ ಸ್ವೀಕರಿಸುವಾಗ ದಾಳಿ ಮಾಡಿರುವ ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದ ತಂಡ ವರದರಾಜು ಅವರನ್ನು ಬಂಧಿಸಿದೆ.
ಲೋಕಾಯುಕ್ತ ಪಿಐಗಳಾದ ರವಿಕುಮಾರ್, ಲೋಕೇಶ್, ಉಮೇಶ್, ಸಿಎಚ್ಸಿಗಳಾದ ರಮೇಶ್, ಜಗದೀಶ್, ಸಿಪಿಸಿಗಳಾದ ಪ್ರಕಾಶ್, ಕಾಂತರಾಜು, ಸಿಬ್ಬಂದಿ ಪುಷ್ಪಲತಾ, ತ್ರಿವೇಣಿ, ಲೋಕೇಶ್, ಮೋಹನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.