ನಂಜನಗೂಡು: ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ನೀಡುವುದೇ ನನ್ನ ಉದ್ದೇಶ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಂಜನಗೂಡು ನಗರದಲ್ಲಿ ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಲು ಸಮುದಾಯಭವನಕ್ಕೆ ಜಾಗವನ್ನು ನೀಡಲಾಗಿದೆ. ಇನ್ನೂಳಿದ 16 ಗುಂಟೆಯಲ್ಲಿ ಗಾಣಿಗರು ಹಾಗೂ ಭೋವಿ ಸಮುದಾಯಕ್ಕೆ ಜಾಗವನ್ನು ಹಂಚಿಕೆ ಮಾಡಿ ಎಂದು ತಹಶೀಲ್ದಾರ್ ಶಿವಮೂರ್ತಿ ಅವರಿಗೆ ನಿರ್ದೇಶನ ನೀಡಿದರು.
20 ಗುಂಟೆ ಉಪ್ಪಾರ ಸಮುದಾಯ ಭವನ, 8 ಗುಂಟೆ ಗೆಜ್ಜಗಾರರಿಗೆ 8 ಗುಂಟೆ ತೆಲಗುಶೆಟ್ಟರಿಗೆ ನೀಡಲಾಗಿದೆ ಇನ್ನೂಳಿದ ಖಾಲಿ ಜಾಗವನ್ನು ಗಾಣಿಗರು ಮತ್ತು ಭೋವಿ ಸಮುದಾಯಕ್ಕೆ ನೀಡಿ ಎಂದರು. ಬಳೆಗಾರ ಶೆಟ್ಟರು ಸೇರಿದಂತೆ ಇನ್ನೂಳಿದ ಸಮುದಯಕ್ಕೂ ಜಾಗ ನೀಡಿ ಎಂದು ಕೇಳುತ್ತಿದ್ದಾರೆ ಎಂದು ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ಹೇಳಿದರು. ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಕ್ಕೂ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಮೂರ್ತಿ, ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ಮಹದೇವಪ್ಪ, ಮಾಜಿ ತಾಪಂ ಸದಸ್ಯ ರಾಮು, ಬಿಜೆಪಿ ಮುಖಂಡ ಕುಂಬ್ರಹಳ್ಳಿ ಸುಬ್ಬಣ್ಣ, ಮಹದೇವ್ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.