News Karnataka Kannada
Friday, May 17 2024
ಮೈಸೂರು

ನಂಜನಗೂಡು: ವಿಧಾನಸಭಾ ಚುನಾವಣೆ,ಹೆಚ್.ಸಿ.ಮಹದೇವಪ್ಪ ಬೆಂಬಲಿಗರ ಸಭೆ

H.C. Mahadevappa's supporters meet for assembly elections
Photo Credit : By Author

ನಂಜನಗೂಡು: ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪರವರ  ಬೆಂಬಲಿಗರ  ಸಭೆ ನಂಜನಗೂಡಿನಲ್ಲಿ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪರವರು ಮಾತನಾಡಿ ಮುಂಬರುವ ವಿಧಾನ ಸಭಾ ಚುನಾವಣೆಯ ನಂಜನಗೂಡು ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು,  ಮುಂಬರುವ ವಿಧಾನ ಸಭಾ ಚುನಾವಣೆಗೆ ನಾನೂ ಸಹ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಟಿಕೆಟ್  ಆಕಾಂಕ್ಷಿಯಾಗಿದ್ದೇನೆ, ಆದರೆ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದ್ದು, ಯಾರೇ ಅಭ್ಯರ್ಥಿಯಾಗಿ ಆಯ್ಕೆಯಾದರೂ ಎಲ್ಲರೂ ಒಟ್ಟಾಗಿ ಅವರ ಗೆಲುವಿಗಾಗಿ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಾಡ್ಯ ಗ್ರಾಮದ ರಂಗಸ್ವಾಮಿ, ಕುಮಾರ, ಶಿವನಾಯಕ, ಚಿಕ್ಕನಾಯಕ, ತಂಬಿ, ಸೇರಿದಂತೆ ಹಲವಾರು ಮುಖಂಡರುಗಳು ಡಾ. ಹೆಚ್.ಸಿ.ಮಹದೇವಪ್ಪರವರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ತಿಂಗಳ ೨೪ ರಂದು  ಹೆಡಿಯಾಲ ಜಿ.ಪಂ ಕ್ಷೇತ್ರದ ಮುಖಂಡರುಗಳಿಂದ ಡಾ. ಹೆಚ್.ಸಿ.ಮಹದೇವಪ್ಪರವರಿಗೆ ಅಭಿನಂದನಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕರ್ತರು ಇದೇ ವೇಳೆ ತಿಳಿಸಿದರು.

ದೇವನೂರು ಬುಲೆಟ್ ಮಹದೇವಪ್ಪ, ಇಂಧನಬಾಬು, ಚಾಮರಾಜು, ಸ್ವಾಮಿ, ಮೂಗಶೆಟ್ಟಿ, ನಾಗೇಂದ್ರ, ಮಲ್ಲಾರಾಧ್ಯ, ಸೋಮಶೇಖರ್,  ಮಹದೇವಪ್ಪ, ನಟರಾಜು, ರಾಜಣ್ಣ, ರವಿ, ಅಜ್ಗರ್, ನಾಸಿರ್ ಖಾನ್, ಮಣಿ, ಲಿಂಗರಾಜು, ಶಂಕರಪ್ಪ, ಉಮೇಶ್, ಗುರುಸ್ವಾಮಿ, ಸಿದ್ದರಾಜು, ಅನುಷ್, ಪರಶಿವಮೂರ್ತಿ, ಸೋಮಣ್ಣ, ಚೆನ್ನನಾಯಕ, ಸೇರಿದಂತೆ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು