ನಂಜನಗೂಡು: ನಂಜನಗೂಡಿನ ಜನಿತ್ ಟೆಕ್ಸ್ ಟೈಲ್ ಕಂಪನಿಯ ನೌಕರರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ರವರು ಭೇಟಿ ನೀಡಿ ಪ್ರತಿಭಟನಾ ನಿರತಾ ನೌಕರರಿಗೆ ಬೆಂಬಲ ಘೋಷಿಸಿ, ಮುಂದಿನ ದಿನಗಳಲ್ಲಿ ನಿಮ್ನ ಸಮಸ್ಯೆಗಳನ್ನ ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರ,ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕುರಟ್ಟಿ ಮಹೇಶ್ ರವರು, ಶಂಕರ್ ರವರು ಮುಖಂಡರಾದ ನಾಗೇಶ್ ರಾಜ್ ರವರು, ಪ್ರದೀಪ್ ರವರು, ಆಲ್ದೂರು ರಾಜ್ ಶೇಖರ್ ರವರು, ಹಾಗೂ ಜನಿತ್ ಟೆಕ್ಸ್ ಟೈಲ್ ಎಂಪ್ಲಾಯಿಸ್ ಅಸೊಷಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.