News Karnataka Kannada
Friday, May 03 2024
ಮೈಸೂರು

ಮೈಸೂರು: ವಿಷ್ಣು ಅಭಿಮಾನಿಗಳಿಂದ ಆಕರ್ಷಕ ಮೆರವಣಿಗೆ

Mysuru: Vishnu fans take out an impressive procession
Photo Credit : By Author

ಮೈಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಕನಸು ನನಸಾಗಿದೆ.13 ವರ್ಷಗಳ ನಿರಂತರ ಪ್ರಯತ್ನ ಫಲ ನೀಡಿದೆ. ಭಾನುವಾರ ಉದ್ಭೂರಿನಲ್ಲಿ ವಿಷ್ಣು ಸ್ಮಾರಕ ಭವನ ಉದ್ಘಾಟನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ನಡೆದ ಮೆರವಣಿಗೆ ಗಮನಸೆಳೆಯಿತು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಇರುವ ಡಾ.ವಿಷ್ಣುವರ್ಧನ್ ಉದ್ಯಾನವನದ ಬಳಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೇಯರ್ ಶಿವಕುಮಾರ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಮಾಜಿ ಕಾರ್ಪೊರೇಟರ್ ಹಾಗೂ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಮೆರವಣಿಗೆಗೆ ಚಾಲನೆ ನೀಡಿದರು.

ನೂರಾರು ಅಭಿಮಾನಿಗಳು ವಿಷ್ಣು ಭಾವಚಿತ್ರವಿರುವ ಬಾವುಟ ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು. ಮುಖ ರಸ್ತೆಗಳಲ್ಲಿ ಸಂಚರಿಸುವ ಮೆರವಣಿಗೆ ಶ್ರೀರಾಂಪುರ ಸರ್ಕಲ್ ನಲ್ಲಿ ಅಂತ್ಯಗೊಂಡು ಆ ನಂತರ ಅವರವರ ವಾಹನದಲ್ಲಿ ಸ್ಮಾರಕ ಬಳಿ ತೆರಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗೆಜ್ಜೆಗಲ್ಲಿ ಮಹೇಶ್, ಸುರೇಶ್ ಗೋಲ್ಡ್, ಹರೀಶ್ ನಾಯ್ಡು, ರಘು, ಸಂತೋಷ್, ಬಸವರಾಜ್, ವಿನಯ್ ಕಣಗಾಲ್, ದೀಪಕ್, ಮಹದೇವ್ ಸೇರಿದಂತೆ ನೂರಾರು ಅಭಿಮಾನಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು