ಮೈಸೂರು: ಜಿಲ್ಲೆಯ ಕನಕನಗರದಲ್ಲಿ ಶುಕ್ರವಾರ ಜನವಸತಿ ಪ್ರದೇಶಕ್ಕೆ ನುಸುಳಿ ಮೂವರ ಮೇಲೆ ದಾಳಿ ನಡೆಸಿದ ಚಿರತೆಯೊಂದು ಸೆರೆಯಾಗಿದೆ.
ವಸತಿ ಬೀದಿಗಳಲ್ಲಿ ಚಿರತೆಯನ್ನು ನೋಡಿ ಜನರು ಭಯಭೀತರಾಗಿದ್ದರು.
ಬೀದಿ ನಾಯಿಯ ಮೇಲೆ ದಾಳಿ ಮಾಡುವಾಗ, ಹಾದುಹೋಗುತ್ತಿದ್ದ ಬೈಕ್ ಸವಾರನ ಮೇಲೆ ಜಿಗಿಯಿತು. ಬೈಕ್ ಸವಾರ ವಾಹನದಿಂದ ಬಿದ್ದಾಗ ಅವನ ಮೇಲೆ ದಾಳಿ ಮಾಡಿತು,ನಂತರ, ಅದು ಅಲ್ಲಿಂದ ಓಡಿಹೋಯಿತು. ಹಾಗೂ ಇತರ ಇಬ್ಬರು ಜನರ ಮೇಲೆ ದಾಳಿ ಮಾಡಿತು.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.
ಅರಣ್ಯಾಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿ ಅದನ್ನು ಹಿಡಿಯಲಾಯಿತು. ಚಿರತೆ ಸೆರೆಯಾದ ನಂತರ ಭಯಭೀತರಾದ ಕನಕನಗರದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.