ಮೈಸೂರು: ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಅಂಗವಾಗಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಮಹಿಳಾ ಘಟಕ ಮೈಸೂರು ವತಿಯಿಂದ ಚಾಮುಂಡಿ ಬೆಟ್ಟದ ಪಾದದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಸವಿತಾ ಘಾಟ್ಕೆ ಮಾತನಾಡಿ, ಚೆನ್ನಮ್ಮ ಒಂದು ಜಾತಿಗೆ ಸೀಮಿತವಾಗದೆ ದೇಶದ ಪ್ರತಿಯೊಬ್ಬರು ಚನ್ನಮ್ಮನನ್ನು ಸ್ಮರಣೆ ಮಾಡಬೇಕು. ಹಿರಿಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಬೇಕು ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಚೆನ್ನಮ್ಮ ಮಾಡಿದ ಹೋರಾಟ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಾವಿರಾರು ವೀರಯೋಧರೊಂದಿಗೆ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಚೆನ್ನಮ್ಮನ ಸಾಹಸ ಎಂದೆಂದಿಗೂ ಅಮರವಾಗಿದ್ದು, ಮಕ್ಕಳಲ್ಲಿ ಚೆನ್ನಮ್ಮನ ಆದರ್ಶಗಳನ್ನು ಬೆಳೆಸಲು ಪಾಲಕರು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೀರಾಬಾಯಿ, ಸಂಘಟನಾ ಕಾರ್ಯದರ್ಶಿ ವನಿತಾಬಾಯಿ, ಪ್ರೇಮ್ ಕುಮಾರಿ, ಸುಶ್ಮಿತಾ, ಶ್ವೇತಾ, ಶೈಲಾ, ಮಂಗಳ, ಭಾಗ್ಯವತಿ, ಹೇಮಾವತಿ ಇನ್ನಿತರರು ಇದ್ದರು.