News Karnataka Kannada
Monday, April 29 2024
ಮೈಸೂರು

ಮೈಸೂರು: ಹುಣಸೂರಿನಲ್ಲಿ ಹನುಮಂತೋತ್ಸವ ಸಮಿತಿ ಕಚೇರಿ ಉದ್ಘಾಟನೆ

Latest News
Photo Credit : News Kannada

ಮೈಸೂರು: ಡಿ.7ರಂದು ನಡೆಯಲಿರುವ 29ನೇ ವರ್ಷದ ಹನುಮ ಜಯಂತಿ ಮೆರವಣಿಗೆಯ ಅಂಗವಾಗಿ ಹಳೇ ವಿಜಯಾ ಬ್ಯಾಂಕ್ ಆವರಣದಲ್ಲಿ ಹನುಮಂತೋತ್ಸವ ಸಮಿತಿ ಕಚೇರಿಯನ್ನು ಸಾಂಬಸದಾಶಿವಸ್ವಾಮೀಜಿ ಹಾಗೂ ನಟರಾಜ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಟರಾಜಸ್ವಾಮೀಜಿ ಮಾತನಾಡಿ, ಜಿಲ್ಲೆಯ ಹುಣಸೂರಿನಲ್ಲಿ ಕೋವಿಡ್-19 ಮತ್ತಿತರ ಕಾರಣಗಳಿಂದ ಕಳೆದ 2ರಿಂದ 3 ವರ್ಷಗಳಿಂದ ಹನುಮಂತೋತ್ಸವ ಮೆರವಣಿಗೆಯನ್ನು ಸರಳವಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ನಿಗದಿಯಂತೆ ಅದ್ಧೂರಿಯಾಗಿ ಉತ್ಸವ ಆಚರಿಸಲು ಸಮಿತಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಾಂಬಸದಾಶಿವ ಸ್ವಾಮೀಜಿ ಮಾತನಾಡಿ, ಹನುಮಂತ ದೇವರು ಎಲ್ಲರ ಆರಾಧ್ಯ ದೈವವಾಗಿದ್ದು, ಈ ಬಾರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಮಿತಿ ನಿರ್ಧರಿಸಿದ್ದು, ತಾಲೂಕಿನ ಜನತೆ ಶ್ರದ್ಧಾಭಕ್ತಿಯಿಂದ ಆಚರಿಸುವಂತೆ ಕೋರಿದರು.

ಉತ್ಸವ ಸಮಿತಿ ಅಧ್ಯಕ್ಷ ವೆಂಕಟನಾರಾಯಣ ದಾಸ್ ಮಾತನಾಡಿ, ನಗರದಲ್ಲಿ ರಸ್ತೆ ತಡೆ ಹಿಂಪಡೆದಿದ್ದು, ಎಲ್ಲ ಪ್ರಮುಖ ರಸ್ತೆಗಳಲ್ಲಿ ಉತ್ಸವ ನಡೆಸಲಾಗುತ್ತಿದೆ. ಈ ಬಾರಿ ತಾಲೂಕಿನ ವಿಶೇಷವಾಗಿ ನಗರದ ವಿವಿಧ ಗರಡಿ ಮನೆಗಳಿಂದ ಹನುಮಂತನ ಮೂರ್ತಿಗಳನ್ನು ತರಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹನುಮಂತೋತ್ಸವದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು