ಮೈಸೂರು: ಚಾಮುಂಡೇಶ್ವರಿಕ್ಷೇತ್ರದ ಹಳೆಕಾಮನಕೊಪ್ಪಲು ಗ್ರಾಮದಲಿ ಕಂಚಿನ ಮಾರಮ್ಮನ ಜಾತ್ರೆಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸಿದರು.
ಬುಧವಾರ ರಾತ್ರಿ 7ವರ್ಷಗಳ ನಂತರ ನಡೆದ ಸಮಾರಂಭದಲ್ಲಿ ಮುಖಂಡ ಕರೀಗೌಡ ಮಾತನಾಡಿ, ಗ್ರಾಮಸ್ಥರು ಊರ ಹೊರಗೆ ಹೊಸದಾಗಿ ಒಲೆಗಳನ್ನು ನಿರ್ಮಿಸಿ ಮಡೆಹೂದಿ ನಂತರ ಲಿಂಗದೇವರಕೊಪ್ಪಲಿನ ವೀರಮಕ್ಕಳ ಕುಣಿತ ಹಾಗೂ ಮಂಗಳ ವಾದ್ಯಗಳೊಂದಿಗೆ ಊರಿನ ಬೀದಿಗಳಲ್ಲಿ ಮಹಿಳೆಯರು ತಂಬಿಟ್ಟಿನ ಆರತಿ ತಂದು ಎಡೆಹಾಕಿ ಪೂಜೆ ಮಾಡಿದ ನಂತರಎಲ್ಲರೂ ಪ್ರಸಾದವನ್ನು ಸವಿಯುತ್ತಾರೆ ಎಂದರು.
ಈ ಹಬ್ಬಕ್ಕೆ ನೆಂಟರು ಗ್ರಾಮದ ಹೆಣ್ಣುಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದ್ದರು.ಇದೇ ಸಂದರ್ಭದಲ್ಲಿ ವೀರಮಕ್ಕಳ ಕುಣಿತದೊಂದಿಗೆ ರಂಗನೃತ್ಯ ಮಾಡಲಾಯಿತು. ಹಬ್ಬದ ಅಂಗವಾಗಿ ಊರ ತುಂಬೆಲ್ಲಾ ದೀಪಾಲಂಕಾರ ಮಾಡಲಾಗಿತ್ತು.
ಸಮಾರಂಭದಲ್ಲಿ ಶಾಸಕ ಜಿ.ಟಿ. ದೇವೇಗೌಡ, ಜಿ.ಪಂ. ಮಾಜಿ ಸದಸ್ಯ ಅರುಣ್ಕುಮಾರ್, ಮುಖಂಡರಾದ ಕರೀಗೌಡ, ಕರಕನಹಳ್ಳಿ ಮಂಜು, ರಾಜೇಶ್, ಶಿವೇಗೌಡ, ಮಟನ್ ಬಸವೇಗೌಡ, ಮಾದೇಗೌಡ, ದಳಪತಿ ಮಹಾದೇವು, ಸೆಂಟ್ರಿಂಗ್ ಮಂಜು, ರವಿಕುಮಾರ್, ರಮೇಶ್, ನಾಗರಾಜ್, ಶಿವಕುಮಾರ್ ಹಾಜರಿದ್ದರು.