ಮೈಸೂರು: ವಿದ್ಯಾರ್ಥಿನಿಯರು ಕರಾಟೆ ಕಲಿಯುವುದರಿಂದ ದೈಹಿಕ ಶಕ್ತಿ ಹೆಚ್ಚುವುದರ ಜೊತೆಗೆ ಸ್ವಯಂರಕ್ಷಣೆ ಮಾಡಿಕೊಳ್ಳಲು ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ತಿಳಿಸಿದರು.
ರಾಜರಾಜೇಶ್ವರಿ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ನಡೆದ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ಪ್ರದರ್ಶನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸುವ ಮೂಲ ಉದ್ದೇಶವೇನೆಂದರೆ, ಒಂದು ಹೆಣ್ಣು ಬ್ಲಾಕ್ ಬೆಲ್ಟ್ ಪಡೆದರೆ ಜೀವನಪರ್ಯಂತ ಎಂತಹ ಸಂದಿಗ್ಧ ಸಂದರ್ಭದಲ್ಲಿಯೂ ಎದುರಿಸಬಲ್ಲಳು. ಆದ್ದರಿಂದ ಈ ವರ್ಷ 6ನೇ ತರಗತಿಯಿಂದಲೇ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುತ್ತಿದ್ದೇವೆ. ಮಹಿಳಾ ಕರಾಟೆ ಪಟುಗಳನ್ನು ನೇಮಕ ಮಾಡಲು ತೀರ್ಮಾನಿಸಿದ್ದೇವೆ. ಹಾಗೂ ಗೌರವಧನವನ್ನು ಸಹ ಹೆಚ್ಚಿಸಲಾಗುತ್ತದೆ. ರಾಜ್ಯದಲ್ಲಿ 50 ಕನಕದಾಸ ಹಾಸ್ಟೆಲ್ಗಳು 100 ಅಂಬೇಡ್ಕರ್ ಹಾಸ್ಟೆಲ್ಗಳು, 5 ದೀನದಯಾಳು ಹಾಸ್ಟೆಲ್ಗಳನ್ನು ಪ್ರಾರಂಭಿಸುತ್ತಿದ್ದೇವೆ. ಮುಂದಿನ ಬಜೆಟ್ನಲ್ಲಿ ಹಿಂದುಳಿದ ವರ್ಗದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನೀಡಲು ಚಿಂತನೆ ಮಾಡಿದ್ದೇವೆ. ಆದ್ದರಿಂದ ಎಲ್ಲರು ಚೆನ್ನಾಗಿ ಅಧ್ಯಯನ ಮಾಡಬೇಕು ಎಂದರು.
ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್. ಮಹೇಶ್ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿ. ಮಾಲತಿ, ನಗರ ಬಿ.ಜೆ.ಪಿ. ಅಧ್ಯಕ್ಷ ಶ್ರೀವತ್ಸ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾದೇವಸ್ವಾಮಿ, ಜೋಗಿಮಂಜು, ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಎಂ.ಕೆ. ಮೇಘ ವಿಶ್ವನಾಥ್, ಸ್ವರ್ಣಲತಾ, ಶಶಿಕಲಾ, ಸತೀಶ್, ಸುಕನ್ಯ, ನಿಲಯಪಾಲಕರಾದ ನಾಗರತ್ನ ಮಹಾಲಕ್ಷ್ಮಿ, ಜಗದೀಶ್ ಕೋರಿ, ಪರಶುರಾಂ, ಯಶವಂತ್, ಲೀಲಾ, ನಾಗೇಶ್, ಚಿಕ್ಕವಡ್ಗಲ್, ರಮ್ಯ, ಮೀನ, ನಾಗರಾಜ್, ಶಿವಕುಮಾರ್, ಭಾನುಪ್ರಕಾಶ್, ತೇಜಸ್ವಿನಿ, ವೀರಬಸಪ್ಪ, ಮಂಜುನಾಥ್, ಅನುಪಮ, ಹೇಮಲತಾ, ರೇಖಾ, ಭಾಗ್ಯಲಕ್ಷ್ಮಿ, ವಸಂತ, ಕರಾಟೆ ತರಬೇತುದಾರರಾದ ಸೋಸಲೆ ಸಿದ್ದರಾಜು, ಮಂಜುಳ, ಭಾರತಿ, ಆನಂದ್ ಹಾಜರಿದ್ದರು.