News Karnataka Kannada
Monday, April 29 2024
ಮೈಸೂರು

ನಂಜನಗೂಡು ಹುಲ್ಲಹಳ್ಳಿ ರಸ್ತೆಯಲ್ಲಿ ವಾಹನ ತಡೆದು ಹಣವಸೂಲಿ: ಪ್ರಯಾಣಿಕರೇ ಎಚ್ಚರ

ನಂಜನಗೂಡು ಹುಲ್ಲಹಳ್ಳಿ ರಸ್ತೆಯಲ್ಲಿ ತಡರಾತ್ರಿ ವಾಹನಗಳಲ್ಲಿ ತೆರಳುವವರು ಹುಷಾರ್ ಯಾಕಂದ್ರೆ ಈ ಹಾದಿಯಲ್ಲಿ ರಾತ್ರಿ ಹೊತ್ತು ಪುಂಡರ ವಸೂಲಿ ಗ್ಯಾಂಗ್ ಫುಲ್ ಆಕ್ಟಿವ್ ಆಗಿರುತ್ತೆ, ನೆನ್ನೆ ತಡರಾತ್ರಿ ತಮಿಳುನಾಡು ಮೂಲದ ಲಾರಿಯೊಂದನ್ನ ತಡೆದು ಹಣವಸೂಲಿಗೆ ನಿಂತ ಇಬ್ಬರು ಯುವಕರು ಕೈಯಲ್ಲಿ ಬಡಿಗೆಗಳನ್ನ ಹಿಡಿದು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
Photo Credit : News Kannada

ನಂಜನಗೂಡು: ನಂಜನಗೂಡು ಹುಲ್ಲಹಳ್ಳಿ ರಸ್ತೆಯಲ್ಲಿ ತಡರಾತ್ರಿ ವಾಹನಗಳಲ್ಲಿ ತೆರಳುವವರು ಹುಷಾರ್ ಯಾಕಂದ್ರೆ ಈ ಹಾದಿಯಲ್ಲಿ ರಾತ್ರಿ ಹೊತ್ತು ಪುಂಡರ ವಸೂಲಿ ಗ್ಯಾಂಗ್ ಫುಲ್ ಆಕ್ಟಿವ್ ಆಗಿರುತ್ತೆ, ನೆನ್ನೆ ತಡರಾತ್ರಿ ತಮಿಳುನಾಡು ಮೂಲದ ಲಾರಿಯೊಂದನ್ನ ತಡೆದು ಹಣವಸೂಲಿಗೆ ನಿಂತ ಇಬ್ಬರು ಯುವಕರು ಕೈಯಲ್ಲಿ ಬಡಿಗೆಗಳನ್ನ ಹಿಡಿದು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

ಈ ದ್ರಶ್ಯ ಕಂಡುಬಂದಿದ್ದು ಮೈಸೂರು ಜಿಲ್ಲೆ ನಂಜನಗೂಡಿನ ಹುಲ್ಲಹಳ್ಳಿ ಮಾರ್ಗ ಮದ್ಯೆ, ರಾತ್ರಿ ಹೊತ್ತು ಈ ಮಾರ್ಗದಲ್ಲಿ ಚಲಿಸುವ ವಾಹನ ಸವಾರರಿಂದ ಹಣ ವಸೂಲಿಗೆ ಮುಂದಾಗಿರೋ ಯುವಕರು ಹಣ ನೀಡಲು ತಡ ಮಾಡಿದ್ರೆ ಬಡಿಗೆಯಿಂದ ಹಲ್ಲೆ ನಡೆಸುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದಾರೆ.

ಇದರಿಂದ ಚಾಲಕರಿಗೆ ಜೀವಭಯವಿದೆ ಎಂದು ಲಾರಿ ಚಾಲಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಪುಂಡರ ಅಟ್ಟಹಾಸವನ್ನ ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಪೊಲೀಸರು ಹಣ ವಸೂಲಿ ಗ್ಯಾಂಗ್ ನ ಪುಂಡರನ್ನ ಬಂಧಿಸಿ ರಾತ್ರಿ ಸಮಯ ನಿರ್ಭೀತಿಯಿಂದ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು