News Karnataka Kannada
Tuesday, April 30 2024
ಮೈಸೂರು

ಶಿಬಿರದಿಂದ ನಾಪತ್ತೆಯಾಗಿದ್ದ ಕುಮಾರಸ್ವಾಮಿ ಆನೆ ಸಾವು

ಹೆಚ್.ಡಿ.ಕೋಟೆ ಬಳ್ಳೆ ಆನೆ ಶಿಬಿರದಿಂದ ನಾಪತ್ತೆಯಾಗಿದ್ದ ಸಾಕಾನೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
Photo Credit : By Author

ಮೈಸೂರು: ಹೆಚ್.ಡಿ.ಕೋಟೆ ಬಳ್ಳೆ ಆನೆ ಶಿಬಿರದಿಂದ ನಾಪತ್ತೆಯಾಗಿದ್ದ ಸಾಕಾನೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಬಳ್ಳೆ ಆನೆ ಶಿಬಿರದಲ್ಲಿ ಕುಮಾರಸ್ವಾಮಿ ಎಂಬ ಸಾಕಾನೆಯಿತ್ತು. ಆದರೆ ಅದು ಕೆಲವು ದಿನಗಳ ಹಿಂದೆ ಶಿಬಿರದಿಂದ ಹೊರ ಹೋಗಿದ್ದು ಮರಳಿ ಬಾರದೆ ನಾಪತ್ತೆಯಾಗಿತ್ತು. ಅರಣ್ಯ ಸಿಬ್ಬಂದಿಗಳು ಇದರ ಹುಡುಕಾಟ ನಡೆಸಿದ್ದರಾದರೂ ಅದು ಪತ್ತೆಯಾಗಿರಲಿಲ್ಲ. ಹೀಗಾಗಿ ಹುಡುಕಾಟ ನಿಲ್ಲಿಸಿದ್ದರು.

ಈ ನಡುವೆ ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಬಿನಿ ಹಿನ್ನೀರು ಪ್ರದೇಶದಲ್ಲಿ ಕೊಳೆತ ವಾಸನೆ ಬಂದ ಹಿನ್ನಲೆಯಲ್ಲಿ ಸೋಮವಾರ ಸಿಬ್ಬಂದಿ ಅತ್ತ ಹೋಗಿ ನೋಡಿದಾಗ ನಾಪತ್ತೆಯಾಗಿದ್ದ ಕುಮಾರಸ್ವಾಮಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಆನೆ 46 ವರ್ಷ ಪ್ರಾಯದ್ದಾಗಿದ್ದು, ಈ ಹಿಂದೆ ಹಾಸನದಲ್ಲಿ ಸೆರೆ ಹಿಡಿದು ಪಳಗಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು