News Karnataka Kannada
Friday, May 03 2024
ಮೈಸೂರು

ಸರಣಿ ಕಳ್ಳತನ ಪ್ರಕರಣ: ಮುಸುಕುಧಾರಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ನಂಜನಗೂಡಿನಲ್ಲಿ ಸರಣಿ ಕಳ್ಳತನ ಬೆಳಕಿಗೆ ಬಂದಿದೆ. ಮುಸುಕು ಧರಿಸಿದ ಖದೀಮರು ಮಾರಕಾಸ್ತ್ರಗಳನ್ನ ಹಿಡಿದು ಓಡಾಡಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಒಂದೇ ರಾತ್ರಿ ಮೂರು ಮನೆಗೆ ಕನ್ನ ಹಾಕಿರುವ ಖದೀಮರು 2.25 ಲಕ್ಷ ನಗದು 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
Photo Credit : News Kannada

ನಂಜನಗೂಡು: ನಂಜನಗೂಡಿನಲ್ಲಿ ಸರಣಿ ಕಳ್ಳತನ ಬೆಳಕಿಗೆ ಬಂದಿದೆ. ಮುಸುಕು ಧರಿಸಿದ ಖದೀಮರು ಮಾರಕಾಸ್ತ್ರಗಳನ್ನ ಹಿಡಿದು ಓಡಾಡಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಒಂದೇ ರಾತ್ರಿ ಮೂರು ಮನೆಗೆ ಕನ್ನ ಹಾಕಿರುವ ಖದೀಮರು 2.25 ಲಕ್ಷ ನಗದು 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಮೂರು ಮನೆಗಳ ಬಾಗಿಲು ಮೀಟಿ ಕೃತ್ಯ ವೆಸಗಿದ್ದಾರೆ. ಪಟ್ಟಣದ ಕೃಷ್ಣಪ್ಪ ಲೇಔಟ್ ನಲ್ಲಿ ಘಟನೆ ನಡೆದಿದೆ. ಸಂತೋಷ್ ಎಂಬುವರ ಮನೆಯಲ್ಲಿ 1.25 ಹಣ ಒಂದು ಕಾಲು ಕೆ.ಜಿ ಬೆಳ್ಳಿ ಮತ್ತು ಹನ್ನೊಂದು ಗ್ರಾಂ ಚಿನ್ನ ಕಳುವಾಗಿದೆ.

ಬಸವರಾಜು ಎಂಬುವರ ಮನೆಯಲ್ಲಿ ಒಂದು ಲಕ್ಷ ಹಣ , ಕಂಪ್ಯೂಟರ್ ಮತ್ತು ಇನ್ನಿತರ ಸಾಮಗ್ರಿಗಳನ್ನ ಕಳುವು ಮಾಡಿದ್ದಾರೆ. ಕಚೇರಿಯೊಂದಕ್ಕೆ ಪ್ರವೇಶಿಸಿರುವ ಖತರ್ನಾಕ್ ಕಳ್ಳರು ಪದಾರ್ಥಗಳನ್ನ ಚೆಲ್ಲಾಪಿಲ್ಲಿ ಎಸೆದಾಡಿದ್ದಾರೆ. ಸಿಸಿ ಟಿವಿ ಅಳವಡಿಸಿದ್ದರೂ ಲೆಕ್ಕಿಸದೆ ಮುಸುಕು ದಾರಿಗಳು ಮಾರಕಸ್ತ್ರಗಳನ್ನು ಹಿಡಿದು ಮನೆಯ ಬಾಗಿಲುಗಳನ್ನು ಮೀಟಿ ಕಳ್ಳತನ ನಡೆಸಿರುವುದು ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿದೆ. ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು