News Karnataka Kannada
Saturday, April 27 2024
ಮೈಸೂರು

ಹುಟ್ಟು ಹಬ್ಬದಂದೇ ಮರಬಿದ್ದು ವ್ಯಕ್ತಿ ಸಾವು

Death
Photo Credit :

ತಿ.ನರಸೀಪುರ: ತಮ್ಮನಿಗೆ ಹುಟ್ಟು ಹಬ್ಬದ ಸಿಹಿ ವಿತರಿಸಿ, ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಮರ ಬಿದ್ದ ಪರಿಣಾಮ ಆತ ಮೃತ ಪಟ್ಟಿರುವ ಘಟನೆ ತಾಲೂಕಿನ ಹಳೇ ಕೆಂಪಯ್ಯನ ಹುಂಡಿ ಗ್ರಾಮದ ಬಳಿ ಸಂಭವಿಸಿದೆ.

ತಾಲೂಕಿನ ಮೂಗೂರು ಗ್ರಾಮದ ನಿವಾಸಿ ಮನು(೨೮) ಎಂಬಾತನೇ ಮರದ ಕೊಂಬೆ ಬಿದ್ದು ದುರಂತ ಸಾವಿಗೀಡಾದ ಯುವಕ. ಈತ ಸೋಮವಾರ ತನ್ನ ಹುಟ್ಟುಹಬ್ಬದ ನಿಮಿತ್ತ ಮೈಸೂರಿನಲ್ಲಿರುವ ತಮ್ಮನ ಮನೆಗೆ ಹೋಗಿ, ಸಿಹಿ ವಿತರಿಸಿ ಮೂಗೂರಿಗೆ  ಬೈಕ್ ನಲ್ಲಿ ಬರುತ್ತಿದ್ದ ವೇಳೆ ನಟ ದರ್ಶನ್ ತೋಟದ ಬಳಿ ಮರವೊಂದು  ಬೈಕ್‌ನಲ್ಲಿ ಬರುತ್ತಿದ್ದ ಮನು ತಲೆ ಮೇಲೆ ಬಿದ್ದಿದೆ.

ಮರ ತಲೆಯ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಮನುವಿಗೆ ತೀವ್ರವಾದ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟನೆಂದು ತಿಳಿದುಬಂದಿದೆ. ಸ್ಥಳಕ್ಕೆ ಪಟ್ಟಣ ಠಾಣೆಯ ಸಿಪಿಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ  ಜರುಗಿಸಿದ್ದಾರೆ.ಮನುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು