ಕೆ.ಆರ್.ಪೇಟೆ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ರಿವೇಣಿ ಸಂಗಮದ ಸಂಗಮೇಶ್ವರ ದೇವಸ್ಥಾನದ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ರಿವೇಣಿ ಸಂಗಮ ಎಂದು ಹೆಸರಾಗಿರುವ ಸಂಗಮೇಶ್ವರ ದೇವಸ್ಥಾನದ ಸುತ್ತ ಮುತ್ತ ಪಂಚಾಯಿತಿ ಎಲ್ಲಾ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿ ದೇವಸ್ಥಾನದ ಆವರಣವನ್ನು ಶಿವರಾತ್ರಿ ಹಬ್ಬದ ಪ್ರಯುಕ್ತ ಸ್ವಚ್ಛ ಮಾಡಿದರು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಟ್ಟೆ ಕ್ಯಾತನಹಳ್ಳಿ ಅಂಜನಿ ಗೌಡ (ಪಾಪಣ್ಣ) ಶಿವರಾತ್ರಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರು ಸಂಗಮೇಶ್ವರ ದೇವಸ್ಥಾನಕ್ಕೆ ಜಾಗರಣೆ ಮಾಡಲು ಆಗಮಿಸುತ್ತಾರೆ ದೇವಸ್ಥಾನದ ಸುತ್ತಮುತ್ತ ಹಾಗೂ ನದಿಯ ದಡದಲ್ಲಿ ಮತ್ತು ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ಮಾಡಿದ್ದೇವೆ. ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳು ಪ್ಲಾಸ್ಟಿಕ್ ಕವರ್ ಮತ್ತೆ ಬೇಡದ ವಸ್ತುಗಳನ್ನು ಎಲ್ಲಂದರೆ ಅಲ್ಲೇ ಬಿಸಾಡುವುದು ಬೇಡ ದೇವಾಲಯದ ಆವರಣದಲ್ಲಿ ಕಸದ ತೊಟ್ಟಿಯನ್ನು ಇಟ್ಟಿದ್ದೇವೆ ಇದನ್ನು ಉಪಯೋಗಿಸಿಕೊಂಡು ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಸ್ವಾಮಿ ತಾಲೂಕಿನಲ್ಲಿ ತಾಲೂಕಿನಲ್ಲಿ ಹೆಸರದಂತಹ ಐತಿಹಾಸಿಕ ಪುರಾಣ ಪ್ರಸಿದ್ಧ ತ್ರಿವೇಣಿ ಸಂಗಮ ಈ ಪವಿತ್ರ ಸ್ಥಳದಲ್ಲಿ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಮೂರು ನದಿಗಳು ಕೂಡಿ ಸಂಗಮವಾಗಿದೆ.
ಈ ನದಿಗಳ ದಡದಲ್ಲಿ ಇರುವಂತಹ ಪುರಾಣ ಪ್ರಸಿದ್ಧ ದೇವಾಲಯ ಸಂಗಮೇಶ್ವರ. ದೇವಾಲಯದ ಸುತ್ತಮುತ್ತ ಶಿವರಾತ್ರಿ ಹಬ್ಬದ ಪ್ರಯುಕ್ತ ಪಂಚಾಯಿತಿ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗದವರು ಸೇರಿ ಸ್ವಚ್ಛತಾ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ. ಹಬ್ಬ ದಿನದಂದು ಬರುವಂತಹ ಸಾರ್ವಜನಿಕರು ದೇವಾಲಯದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು ಕಡ್ಡಾಯವಾಗಿ ಪ್ಯಾಸ್ಟಿಕ್ ನಿಷೇಧ ಮಾಡಿ ಕೈಚೀಲ ಬಳಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಯ್ಯ, ಸದಸ್ಯರಾದ ವಸಂತ್ ಕುಮಾರ್, ಮಹೇಶ್, ಪ್ರಕಾಶ್, ಸಚಿನ್, ಮಾಂಬಳ್ಳಿ ರವಿ, ರಾಮಣ್ಣ ಮುಖಂಡರುಗಳಾದ ಸಂಗಾಪುರ ಶಶಿಧರ್, ಪುಟ್ಟಸ್ವಾಮಿಗೌಡ, ಸೋಮನಹಳ್ಳಿ ಕೇಶವ್ ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.