ಮೈಸೂರು: ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ ಅಂಗಡಿಗೆ ಸೋಮವಾರ ನುಗ್ಗಿದ ನಾಲ್ವರು ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿ, ಆಭರಣ ದೋಚಿದೆ.
ಇವರು ಹಾರಿಸಿದ ಗುಂಡು ಗ್ರಾಹಕ ಚಂದ್ರು ಎಂಬುವವರಿಗೆ ತಗುಲಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.
ಸಂಜೆ 4 ಗಂಟೆ ಸಮಯದಲ್ಲಿ ಬೈಕಿನಲ್ಲಿ ಬಂದ ನಾಲ್ವರು, ಮಾಲೀಕ ಧರ್ಮೇಂದ್ರ ಅವರನ್ನು ಥಳಿಸಿ ಆಭರಣ ದೋಚಿದರು. ಪರಾರಿಯಾಗುವಾಗ ಎದುರಾದ ಚಂದ್ರು ಮೇಲೆ ಗುಂಡು ಹಾರಿಸಿದ್ದಾರೆ. ಚಂದ್ರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಧರ್ಮೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.