ಮೈಸೂರು:ನಗರದ ಜನೌಷಧಿ ಕೇಂದ್ರ ಮಾಲೀಕರ ಸಂಘದ ವತಿಯಿಂದ ಜನೌಷಧಿ ನಾಲ್ಕನೇ ವರ್ಷದ ಅಂಗವಾಗಿ ಮೈಸೂರಿನಲ್ಲಿ ಏಳು ದಿನಗಳ ಕಾಲ ಸಾರ್ವಜನಿಕರಿಗೆ ಜನೌಷಧಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಜನ ಔಷಧಿ ಮಿತ್ರ ಬನಾವೋ ಎಂಬ ಕಾರ್ಯಕ್ರಮವು ನಡೆದಿದ್ದು, ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತ ರಾದ ವಿಶ್ವಮಾನವ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಗೌಡ , ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜೀವಧಾರ ರಕ್ತನಿಧಿ ಕೇಂದ್ರದ ಅಧ್ಯಕ್ಷ ಗಿರೀಶ್, ಆಶಾದಾಯಕ ಟ್ರಸ್ಟ್ ಅಧ್ಯಕ್ಷ ಸುರೇಶ್, ಸಾಮಾಜಿಕ ಕಾರ್ಯಕರ್ತ ಪುನೀತ್ ಕುಮಾರ್, ನಿವೃತ್ತ ಯೋಧ ಬಾಲಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭ ಜನೌಷಧಿ ಮಾಲೀಕರಾದ ಉಮೇಶ್ ಮಾತನಾಡಿ, ಭಾರತದಾದ್ಯಂತ 8657ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ಪ್ರಸಕ್ತ ಸಾಲಿನ ವರ್ಷದಲ್ಲಿ 1118ಹೊಸ ಕೇಂದ್ರಗಳು ತೆರೆದಿರುತ್ತವೆ. ಮೈಸೂರಿನಲ್ಲಿ 30 ಕೇಂದ್ರಗಳಿದ್ದು, ಒಟ್ಟು 1480 ರೀತಿಯ ಔಷಧಗಳು ಲಭ್ಯವಿರುತ್ತದೆ. 250 ಬಗೆಯ ಸರ್ಜಿಕಲ್ ವಸ್ತುಗಳು ಲಭ್ಯವಿರುವುದಾಗಿ ಹೇಳಿದರು. ನಗರದ ವಿವಿಧ ಮಳಿಗೆ ಮತ್ತು ಆಸ್ಪತ್ರೆಗಳಲ್ಲಿ ದೊರೆಯುವ ಔಷಧಿಗಳ ದರಕ್ಕೆ ಹೋಲಿಸಿದರೆ ಶೇ 50 ರಿಂದ 80ಕ್ಕೂ ಕಡಿಮೆ ದರದಲ್ಲಿ ಎಲ್ಲಾ ರೀತಿಯ ಔಷಧಿಗಳು ಇಲ್ಲಿ ಲಭ್ಯ ಇರುವುದಾಗಿ ಹೇಳಿದರು.
ಬಹುತೇಕ ಮಳಿಗೆಗಳಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ತಯಾರಾದ ಔಷಧಿಗಳು ಮಾರಾಟವಾದರೆ, ಇಲ್ಲಿ ಅಂಥ ಸಂಸ್ಥೆಗಳ ಬದಲಾಗಿ ಕಾಯಿಲೆ ಗುಣಪಡಿಸಬಲ್ಲ ಅಂಶಗಳುಳ್ಳ ಔಷಧಿಗಳು ಸಿಗುತ್ತವೆ. ನಗರ ಮತ್ತು ಗ್ರಾಮೀಣ ಪ್ರದೇಶದ ವಾಸಿಗಳು ನಿಧಾನವಾಗಿ ಜನೌಷಧಿ ಕೇಂದ್ರದತ್ತ ಆಸಕ್ತಿ ತಳೆಯುತ್ತಿದ್ದು, ಅತ್ಯಂತ ಕಡಿಮೆ ದರದಲ್ಲಿ ಔಷಧಿ ಸಿಗುವುದು ಮತ್ತು ಹಣ ಉಳಿತಾಯ ಆಗುವುದು ಸಂತಸ ತಂದಿದೆ ಎಂದರು.
ಈ ವೇಳೆ ಜನೌಷಧಿ ಮಾಲೀಕರಾದ ಕಿಶೋರ್ ಕುಮಾರ್, ಉಮೇಶ್, ಮಲ್ಲೇಶ್, ಲಕ್ಷ್ಮಿ, ದೀಪ, ವೀರಪ್ಪಗೌಡ, ಗಿರಿಜಾ, ರಾಧಾಕೃಷ್ಣ, ಪ್ರಶಾಂತ್, ಹರ್ಷ, ತುಳಸಿ, ನಾಗಮಣಿ, ರೇಖಾ ಶ್ರೀನಿವಾಸ್, ವಿದ್ಯಾ, ಹರೀಶ್ ನಾಯ್ಡು ಸೇರಿದಂತೆ ಹಲವರು ಇದ್ದರು.