News Karnataka Kannada
Tuesday, April 30 2024
ಮೈಸೂರು

ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಹೋರಾಟ ಮುಂದುವರಿಕೆ ; ಸಾ ರಾ ಮಹೇಶ್‌

Sa Ra Mahesh
Photo Credit :

ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಅವರನ್ನು ಅಮಾನತು ಮಾಡುವ ಆಗ್ರಹ ನನ್ನದಾಗಿತ್ತು. ಸರ್ಕಾರ ಕೇವಲ ವರ್ಗಾವಣೆ ಮಾತ್ರ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ ಸಾ.ರಾ.ಮಹೇಶ್ಇಂತಹ ಅಧಿಕಾರಿ ಮೈಸೂರಿಗೆ ಬೇಡ ಅಂತಾ ಆರಂಭದಲ್ಲೇ ಹೇಳಿದ್ದೆ. ಆಗ ಸಚಿವರು, ಸಂಸದ ಹಾಗೂ ಶಾಸಕರು ಅವರ ಪರ ನಿಂತಿದ್ದರು. ಜಿಲ್ಲಾಡಳಿತಕ್ಕೆ ಅವರಿಂದ ಕೆಟ್ಟ ಹೆಸರು ಬರುತ್ತಿದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಂಡರು ಎಂದರು.ಪಾರಂಪರಿಕ ಕಟ್ಟಡ ವ್ಯಾಪ್ತಿಯಲ್ಲಿ ಈಜುಕೊಳ, ಕಟ್ಟಡ ನವೀಕರಣ, ಮುಡಾದಿಂದ ವಕೀಲರೊಬ್ಬರಿಗೆ ನೀಡಿರುವ‌ ದೊಡ್ಡ ಮೊತ್ತವನ್ನು ರೋಹಿಣಿ‌ ಸಿಂಧೂರಿ ಅವರಿಂದಲೇ ಭರಿಸಬೇಕು. ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುವುದಾಗಿ ಸಾ. ರಾ. ಮಹೇಶ್​ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು