News Karnataka Kannada
Saturday, May 11 2024
ಮೈಸೂರು

ನಂಜಾಪುರದಲ್ಲಿ ಮಾರಮ್ಮನಿಗೆ ತಂಬಿಟ್ಟಿನ ಆರತಿ

Maramma Festival
Photo Credit :

ಹುಣಸೂರು: ಬಯಲು ಸೀಮೆಯಲ್ಲೀಗ ಮಾರಮ್ಮನ ಜಾತ್ರೆ ನಡೆಯುತ್ತಿದ್ದು, ಅದರಂತೆ ತಾಲೂಕಿನ ನಂಜಾಪುರದ ಗ್ರಾಮ ದೇವತೆ  ಶ್ರೀ ಮಾರಮ್ಮ ದೇವಿಯ ಉತ್ಸವವು  ಗ್ರಾಮಾದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಗ್ರಾಮಸ್ಥರು ದೇವಿಗೆ ತಂಬಿಟ್ಟಿನ ಆರತಿ ಮಾಡಿ ಸೇವೆ ಅರ್ಪಿಸಿದರು.

ಜಾತ್ರೆ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ದೇವರಿಗೆ ವಿವಿಧ ಪೂಜೆಗಳನ್ನು ನೆರವೇರಿಸಿದರು.ಮೆರವಣಿಗೆ ಮೊದಲು ಗ್ರಾಮದಲ್ಲಿ ಹರಿಯುವ ಕಾಲುವೆಯಲ್ಲಿ ಪೂಜೆ ಸಲ್ಲಿಸಿದ ನಂತರ ದೇವರ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಗ್ರಾಮದ ಬೀದಿಗಳಲ್ಲಿ ದೇವಿಯ ಉತ್ಸವದ ಮೆರವಣಿಗೆ ನಡೆಯಿತು.ಜಾತ್ರೆ ಪ್ರಯುಕ್ತ ಆರು ನೂರಕ್ಕೂ ಹೆಚ್ಚು ಮಂದಿ ಮಕ್ಕಳು ಮತ್ತು ಹೆಂಗೆಳೆಯರು ತಂಬಿಟ್ಟನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಕೆಲ ಪುರುಷರು ಸಹ ವಿವಿಧ ಮಾದರಿಯ ತಂಬಿಟ್ಟು  ತಟ್ಟೆಯನ್ನು ತಲೆ ಮೇಲೆ ಹೊತ್ತು  ಮೆರವಣಿಗೆಯೊಂದಿಗೆ ದೇವಸ್ಥಾನದ ಬಳಿಗೆ ತೆರಳಿದರು.

ಹಬ್ಬದ ಹಿನ್ನಲೆಯಲ್ಲಿ ಗ್ರಾಮಕ್ಕೆ ನೆಂಟರಿಷ್ಟರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು