ಮೈಸೂರು: ಹಾಲು ತರಲೆಂದು ಮನೆಯಿಂದ ಹೊರಗೆ ಹೋದ ಗೃಹಿಣಿಯ ಶವ ರೈಲ್ವೆ ಹಳಿ ಬಳಿ ಛಿದ್ರವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಗರದ ಕುಂಬಾರಕೊಪ್ಪಲಿನ ನಿವಾಸಿ ಸಾಗರ್ ಎಂಬುವರ ಪತ್ನಿ ಸ್ವಾತಿ(19) ದುರಂತ ಸಾವನ್ನಪ್ಪಿದ ದುರ್ದೈವಿ. ಮೂಲತಃ ಶ್ರೀರಂಗಪಟ್ಟಣದ ನಿವಾಸಿ ಸ್ವಾತಿ ಕಳೆದ ಹತ್ತು ತಿಂಗಳ ಹಿಂದೆ ಸಾಗರ್ ನನ್ನು ಮದುವೆಯಾಗಿದ್ದಳು.
ಮೇಲ್ನೋಟಕ್ಕೆ ಗಂಡ ಹೆಂಡಿರು ಅನೋನ್ಯವಾಗಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ರೈಲ್ವೆ ಹಳಿಯಲ್ಲಿ ಸ್ವಾತಿಯ ತಲೆ ಛಿದ್ರವಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಬಹುಶಃ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಇದಕ್ಕೆ ಕಾರಣ ಏನಿರಬಹುದು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಸ್ವಾತಿ ಮನೆಯಿಂದ ಹಾಲು ತರುವುದಾಗಿ ಹೇಳಿ ಜ.1ರಂದು ಹೋಗಿದ್ದಳು. ಹೀಗೆ ಹೋದವಳು ಮರಳಿ ಬಂದಿರಲಿಲ್ಲ ಎನ್ನಲಾಗಿದೆ.
ಸಂಜೆ ವೇಳೆಗೆ ನಗರದ ವಿಕ್ರಾಂತ್ ಕಾರ್ಖಾನೆ ಬಳಿ ಇರುವ ಪ್ರೀತಿ ಗ್ರಾನೈಟ್ ಬಳಿ ರೈಲ್ವೆ ಹಳಿ ಸಮೀಪ ತಲೆ ಛಿದ್ರವಾಗಿರುವ ಸ್ವಾತಿ ಮೃತದೇಹ ದೊರೆತಿದೆ. ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.