News Karnataka Kannada
Monday, April 29 2024
ಮೈಸೂರು

ಕೋವಿಡ್‌ ಹೆಚ್ಚಳಕ್ಕೆ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೇ ಕಾರಣ: ಮಾಲವಿಕ ಗುಬ್ಬಿವಾಣಿ

ರಾಜ್ಯದಲ್ಲಿ ಈವರೆಗೆ 199 ಜನರಲ್ಲಿ ಜೆಎನ್.1 ದೃಢ ಪಟ್ಟಿದೆ. ಜಿನೋಮಿಕ್ ಸ್ವೀಕೆನ್ಸ್ ವರದಿಯಲ್ಲಿ 199 ಮಂದಿಗೆ ಜೆಎನ್.1 ಸೋಂಕು ತಗುಲಿರೋದು ದೃಢಪಟ್ಟಿದೆ. ಈವರೆಗೆ ಜಿನೋಮ್‌ ಸೀಕ್ವೆನ್ಸ್‌ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ‌ ರವಾನಿಸಲಾಗಿತ್ತು. ಡಿಸೆಂಬರ್ 25ರಂದು ಹೊರ ಬಿದ್ದ ಮೊದಲ ರಿಪೋರ್ಟ್ ನಲ್ಲಿ 60 ಸ್ಯಾಂಪಲ್ ಗಳ ಪೈಕಿ 34 ಮಂದಿಗೆ ಜೆಎನ್ 1 ತಗುಲಿರೋದು ಪತ್ತೆಯಾಗಿದೆ.
Photo Credit :

ಮೈಸೂರು : ಜನಸಾಮಾನ್ಯರು ಹೈರಾಣಾಗುವಂತೆ ನಿರ್ಬಂಧಗಳನ್ನು ವಿಧಿಸಿದರೂ ಕೋವಿಡ್‌ ನಿಯಂತ್ರಣಕ್ಕೆ ಬಾರದಿರುವುದಕ್ಕೆ ರಾಜ್ಯ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೇ ಕಾರಣ ಎಂದು ಆಮ್‌ ಆದ್ಮಿ ಪಾರ್ಟಿಯ ಮೈಸೂರು ಜಿಲ್ಲಾಧ್ಯಕ್ಷರಾದ ಮಾಲವಿಕ ಗುಬ್ಬಿವಾಣಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆ ಬುಧವಾರ 562 ತಲುಪಿದ ಕುರಿತು ಪ್ರತಿಕ್ರಿಯಿಸಿದ ಮಾಲವಿಕ ಗುಬ್ಬಿವಾಣಿ, “ಸಭೆ ಸಮಾರಂಭಗಳಿಗೆ ವಾರಾಂತ್ಯ ಮಾತ್ರ ನಿರ್ಬಂಧ ವಿಧಿಸಿ, ಬೇರೆ ದಿನಗಳಲ್ಲಿ 200 ಜನರು ಒಂದೆಡೆ ಸೇರಲು ಆಸ್ಪದ ನೀಡಲಾಗಿದೆ. ವಾರದ ದಿನಗಳ ಜನಸಂದಣಿಯಲ್ಲಿ ಸೋಂಕು ಹರಡುವುದಿಲ್ಲವೇ? ಸೋಂಕು ನಿಯಂತ್ರಣಕ್ಕೆ ಬರುವ ತನಕ ಯಾವುದೇ ಸಭೆ ಸಮಾರಂಭಗಳಿಗೆ ಯಾವುದೇ ದಿನದಂದು ಸರ್ಕಾರ ಅವಕಾಶ ನೀಡಬಾರದು. ರಾತ್ರಿ ಕರ್ಫ್ಯೂಯಿಂದ ಏನು ಉಪಯೋಗವಾಗುತ್ತಿದೆ? ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಅವೈಜ್ಞಾನಿಕವೆಂದು ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ಕಾರ್ಯಕ್ರಮಗಳು ಹಾಗೂ ರಾಜಕೀಯ ಸಮಾರಂಭಗಳಲ್ಲಿ ಜನಸಂದಣಿಗೆ ಅವಕಾಶ ನೀಡುತ್ತಿರುವುದರಿಂದ ನಿರ್ಬಂಧಗಳ ಉದ್ದೇಶವೇ ಹಾಳಾಗುತ್ತಿದೆ. ಸಾಮಾನ್ಯ ಜನರು ಅನಗತ್ಯವಾಗಿ ಆರ್ಥಿಕ ಹೊಡೆತಕ್ಕೆ ಸಿಲುಕುತ್ತಿದ್ದಾರೆ. ನಿಯಮಗಳು ವೈಜ್ಞಾನಿಕವಾಗಿದ್ದರೆ ಮಾತ್ರ ಜನರು ಅದನ್ನು ಪಾಲಿಸುತ್ತಾರೆ” ಎಂದು ಹೇಳಿದರು.

“ವಾರಾಂತ್ಯದಲ್ಲಿ ಕಠಿಣ ನಿರ್ಬಂಧಗಳನ್ನು ಹಾಕಿರುವುದರಿಂದ ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಸೇರಿದಂತೆ ಅನೇಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವರಿಗೆ ವಾರಾಂತ್ಯದ ದುಡಿಮೆಯೇ ಜೀವನಕ್ಕೆ ಆಧಾರ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಮಾಸ್ಕ್‌, ಸ್ಯಾನಿಟೈಜರ್‌ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯಗೊಳಿಸಿ, ವಾರಾಂತ್ಯ ಕೂಡ ವಹಿವಾಟಿಗೆ ಅವಕಾಶ ನೀಡಬೇಕು” ಎಂದು ಮಾಲವಿಕ ಗುಬ್ಬಿವಾಣಿ ಆಗ್ರಹಿಸಿದರು.

ಸರ್ಕಾರದ ನಿರ್ಬಂಧಗಳನ್ನು ಸಾಮಾನ್ಯ ಜನರು ಸ್ವಲ್ಪ ಉಲ್ಲಂಘಿಸಿದರೂ ದಂಡ ವಿಧಿಸಲಾಗುತ್ತಿದೆ ಅಥವಾ ಲಾಠಿ ಏಟು ನೀಡಲಾಗುತ್ತಿದೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ವಾರಾಂತ್ಯದಲ್ಲಿ ಜನರನ್ನು ಸೇರಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ರೇಣುಕಾಚಾರ್ಯ ಮುಂತಾದವರು ದೊಡ್ಡ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿದಾಗ ಪೊಲೀಸರು ಕೇವಲ ಕೇಸು ದಾಖಲಿಸಿಕೊಂಡು ಸುಮ್ಮನಾಗುತ್ತಾರೆ. ಅವರನ್ನು ಬಂಧಿಸುವುದಿಲ್ಲ ಹಾಗೂ ಅವರ ಮೇಲೆ ಲಾಠಿ ಎತ್ತುವುದಿಲ್ಲವೇಕೆ? ಸಾಮಾನ್ಯರಿಗೇ ಒಂದು ಕಾನೂನು, ಪ್ರಭಾವಿಗಳಿಗೇ ಒಂದು ಕಾನೂನು ಮಾಡಲಾಗಿದೆಯೇ?” ಎಂದು ಮಾಲವಿಕ ಗುಬ್ಬಿವಾಣಿ ಪ್ರಶ್ನಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು