News Karnataka Kannada
Sunday, April 28 2024
ಮೈಸೂರು

ಕುವೆಂಪುಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ: ಬಿ.ಸಿ.ನಾಗೇಶ್

B C Nagesh
Photo Credit :

ಮೈಸೂರು: ಕುವೆಂಪು ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕಾಂಗ್ರೆಸ್‌ನವರು ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕದಲ್ಲಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್‌ನವರು ಟಿಪ್ಪು, ನಾರಾಯಣ್ ಗುರು, ಭಗತ್ ಸಿಂಗ್, ಬಸವಣ್ಣನ ಮೇಲೆ ಸುಳ್ಳು ಹಬ್ಬಿಸಿದರು.  ಆ ಸುಳ್ಳುಗಳು ಫೇಲ್ ಆದ ಕಾರಣ ಕುವೆಂಪು ಅವರನ್ನು ಹಿಡಿದುಕೊಂಡಿದ್ದಾರೆ. ಅದು ಸಹಾ ಮಿಸ್ ಫೈರ್ ಆಗಿದೆ. ಸಿದ್ದರಾಮಯ್ಯ ಕುವೆಂಪು ಅವರ ಕ್ಷಮೆಯಾಚಿಸಬೇಕು. ಕುವೆಂಪು ಅವರ ನಾಲ್ಕು ಪಾಠವನ್ನು ಸಿದ್ದು ಕೈ ಬಿಟ್ಟಿದ್ದರು. ನಾವು ಅದನ್ನು ಸೇರಿಸುವ ಪ್ರಯತ್ನ ಮಾಡಿದ್ದೇವೆ. ಈ ದೇಶದ ಸಂಸ್ಕೃತಿ ಬಗ್ಗೆ ಮಾತನಾಡಿದ್ದನ್ನು ಅವರು ತೆಗೆದು ಹಾಕಿದ್ದಾರೆ. ದಯಮಾಡಿ ಕಾಂಗ್ರೆಸ್ ಪುಸ್ತಕವನ್ನು ಓದಲಿ. ಕಂಟೆಂಟ್ ಇಟ್ಟುಕೊಂಡು ವಾದ ಮಾಡಿ. ಅದು ಬಿಟ್ಟು ವ್ಯಕ್ತಿಗತವಾಗಿ ವಾದ ಮಾಡಬೇಡಿ ಅದು ಸರಿಯಲ್ಲ ಎಂದರು.

ಪಠ್ಯದಲ್ಲಿ ಕೇಸರಿಕರಣ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಕನ್ನಡಕದಿಂದ ಆ ರೀತಿ ಕಾಣುತ್ತಿರಬಹುದು. ನನ್ನ ಕನ್ನಡಕದಲ್ಲಿ ಯಾವುದೇ ಬಣ್ಣ ಕಾಣುತ್ತಿಲ್ಲ. ನಮಗೆ ಕಮ್ಯುನಿಸ್ಟ್ ಅಥವಾ ಬೇರೆ ಬಣ್ಣ ಕಾಣಲ್ಲ. ಟಿಪ್ಪು ಸುಲ್ತಾನ್  ಪುಸ್ತಕ ತಂದರೂ ನಮಗೆ ಬಣ್ಣ ಕಾಣಲಿಲ್ಲ. ನಮಗೆ ಮಕ್ಕಳು ಮಾತ್ರ ಕಾಣಿಸುತ್ತಾರೆ. ಕಾಂಗ್ರೆಸ್ ಜೀವನದುದ್ದಕ್ಕೂ ಬಣ್ಣ ಕಂಡಿದೆ. ಮತ ಬಿಟ್ಟು ಬೇರೆ ಏನನ್ನು ಯೋಚನೆ ಮಾಡಿದವರಲ್ಲ. ಹಸಿರು ಬಣ್ಣದವರು ಮತ ಹಾಕಲ್ಲ ಅಂತಾ ಅವರಿಗೆ ಭಯ. ಯಾವ ಕಾಂಗ್ರೆಸ್ ಪಕ್ಷದವರು ಪಠ್ಯ ಪುಸ್ತಕವನ್ನೇ ಓದಿಲ್ಲ. ಇದಕ್ಕೆ ಸಾಕ್ಷಿ ಅವರು ಮಾಡಿರುವ ಟ್ವೀಟ್‌ಗಳು. ಕಾಂಗ್ರೆಸ್ ಶಿಕ್ಷಣ ಇಲಾಖೆಯನ್ನು ಮತ ಬ್ಯಾಂಕ್ ಮಾಡಿತ್ತು. ಅದಕ್ಕಾಗಿ ಪಠ್ಯದಲ್ಲಿ ತಪ್ಪುಗಳಾಗಿತ್ತು ಎಂದು ಕಿಡಿಕಾರಿದರಲ್ಲದೆ, ಮತ್ತೆ ಪಠ್ಯ ಪುಸ್ತಕ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ಪುಸ್ತಕ ಈಗಾಗಲೇ ಮುದ್ರಣವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು