ಮೈಸೂರು: ಮುಂದಿನ ಜಿಪಂ ಚುನಾವಣೆ ಒಳಗಡೆ ಹುಣಸೂರು, ಕೆ.ಆರ್.ನಗರ, ಚಾಮರಾಜ ಕ್ಷೇತ್ರಗಳಲ್ಲಿ ಯಾವುದಾದರೂ ಒಂದರಲ್ಲಿ ನನ್ನ ಪುತ್ರ ಹರೀಶ್ಗೌಡನಿಗೆ ಎಂಎಲ್ಎ ಟಿಕೆಟ್ ಕೊಡುತ್ತೇವೆಂದು ಭರವಸೆ ನೀಡಿದರೆ ಕಾಂಗ್ರೆಸ್ ಸೇರುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ʻಆಂದೋಲನʼ ಡಿಜಿಟಲ್ನೊಂದಿಗೆ ಶುಕ್ರವಾರ ಮಾತನಾಡಿದ ಅವರು, ಯಾಕಪ್ಪ ತಟಸ್ಥವಾಗಿದ್ದೀಯಾ. ನಮ್ಮ ಜೊತೆ ಬಾ, ಎಲ್ಲರೂ ಒಟ್ಟಾಗಿ ಹೋಗೋಣ ಅಧಿಕಾರವನ್ನೂ ಹಂಚಿಕೊಳ್ಳೋಣ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಆಹ್ವಾನಿಸಿದ್ದಾರೆ. ನಾನು ಕಾಂಗ್ರೆಸ್ ಸೇರಬೇಕಾದರೆ, ಪುತ್ರ ಹರೀಶ್ ಗೌಡ ಅವರಿಗೆ ಎಂಎಲ್ಎ ಟಿಕೆಟ್ ಕೊಡಬೇಕು ಎಂದು ಕೇಳಿದ್ದೇನೆ. ಅದಕ್ಕೆ ಅವರು, ಪಕ್ಷದ ಹಿರಿಯರೊಂದಿಗೆ ಹಾಗೂ ಸಮಿತಿಯಲ್ಲಿ ಚರ್ಚಿಸಿ ನಿಮ್ಮ ಪರವಾಗಿ ಮಾತನಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಇದೆಲ್ಲ ಅಂತಿಮ ಆದ್ಮೇಲೆ ನಾನು ಕಾಂಗ್ರೆಸ್ ಸೇರುವ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆ ಒಳಗಡೆ ಅವರು ಒಪ್ಪಿಗೆ ಸೂಚಿಸಿದರೆ ನಾವು ಕಾಂಗ್ರೆಸ್ ಸೇರುತ್ತೇವೆ. ಇಲ್ಲವೇ ಹೀಗೆಯೇ ಮುಂದುವರಿಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಈ ಮೂರು ಕ್ಷೇತ್ರಗಳಲ್ಲಿ ಯಾವುದರಲ್ಲಾದ್ರೂ ಪುತ್ರನಿಗೆ ಎಂಎಲ್ಎ ಟಿಕೆಟ್ ನೀಡಿದರೆ ಪಕ್ಷ ಸೇರ್ಪಡೆ ; ಜಿ ಟಿ ದೇವೇಗೌಡ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.