News Karnataka Kannada
Wednesday, May 01 2024
ಮೈಸೂರು

ಮೈಸೂರು: ಸೋಲಿನ ಭೀತಿಯಲ್ಲಿರುವ ಸಿದ್ದರಾಮಯ್ಯ, ಪ್ರತಾಪ್‌ ವ್ಯಂಗ್ಯ

Pratap Simha likely to contest against Siddaramaiah in Varuna constituency
Photo Credit : News Kannada

ಮೈಸೂರು: ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ, ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರಗಳು ದೊರೆಯದ ಕಾರಣ ವರುಣಾಕ್ಕೆ ಮರಳುವಂತಾಗಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಬೇರೆ ಕ್ಷೇತ್ರದಲ್ಲಿ ಬೆಂಬಲ ದೊರೆಯದ ಕಾರಣ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಮರಳಿ ಬರುತ್ತಿದ್ದಾರೆ. ಈ ಹಿಂದೆ ಬಾದಾಮಿಯಲ್ಲಿ ಅಲ್ಪ ಮತಗಳಿಂದ ಸೋಲಿನ ದವಡೆಯಿಂದ ಪಾರಾಗಿರುವುದನ್ನು ನಾವು ಕಾಣಬಹುದು ಎಂದು ಅವರು ತಿಳಿಸಿದರು. ಈ ಬಾರಿ ಎಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯಗೆ ಸೋಲು ಖಚಿತ ಎಂದರು. ಆದರೆ ಕೋಲಾರದಲ್ಲಿ ಟಿಕೇಟ್‌ ನೀಡಲು ಹೈಕಮಾಂಡ್‌ ಸಿದ್ದವಿಲ್ಲ.

ಈಗ ಕೇಳಿದ ಸ್ಥಳದಲ್ಲಿ ಟಿಕೇಟ್‌ ನೀಡಲು ಸಿದ್ಧವಿಲ್ಲ. ಈ ಕಾರಣದಿಂದ ಸಿಎಂ ಸ್ಥಾನದಲ್ಲಿ ಸಿದ್ದು ಅವರನ್ನು ಕುಳ್ಳಿರಿಸಲು ಹೈಕಮಾಂಡ್‌ ಸಿದ್ದವಿದೆಯೇ ಎಂದು ಪ್ರಶ್ನಿಸಿದರು. 2018ರಲ್ಲಿಯೇ ಅವರ ರಾಜಕೀಯ ಜೀವನ ಮುಗಿದಿದೆ ಎಂದರು. ವಿಧಾನಸಭೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು 2029ರವರೆಗೆ ಮೋದಿಯವರ ಆಡಳಿತದಲ್ಲಿ ಸಂಸದನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು