ಮೈಸೂರು: ಮೈಸೂರು ಒಂದು ಇತಿಹಾಸವುಳ್ಳ ನಗರ. ನಾಡ ದೇವತೆ ಜಗನ್ಮಾತೆ ಚಾಮುಂಡೇಶ್ವರಿ ನೆಲೆಸಿರುವ ಇಂತಹ ಪವಿತ್ರವಾದಂತ ಪುಣ್ಯಭೂಮಿ. ಇನ್ನು ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ. ಆದರೆ ಇಲ್ಲಿ ಕನ್ನಡವನ್ನು ಕಡೆಗಣಿಸಿ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಿರುವುದು ಕಂಡು ಬಂದಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿ ಈ ಕೂಡಲೇ ಎಲ್ಲಾ ಇಲಾಖೆಯವರು ಸಹ ಕನ್ನಡವನ್ನ ಮೊದಲನೇ ಸ್ಥಾನದಲ್ಲಿ ಇಡುವಂತೆ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ʼನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದʼ ಆಗ್ರಹ ಕೇಳಿಬಂದಿದೆ.
ಅಲ್ಲದೇ ಇದಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆಯನ್ನು ಕನ್ನಡ ಪರ ಹೋರಾಟಗಾರ ಸಂಸ್ಥಾಪಕ ಡಿಪಿಕೆ ಪರಮೇಶ್ ಖಂಡಿಸಿದ್ದಾರೆ.