ಮೈಸೂರು: ಕೇವಲ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಮಾತ್ರ ಅಧ್ಯಯನ ಮಾಡದೇ ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಭಾಷೆಗಳ ದಾಖಲೀಕರಣಕ್ಕೂ ಒತ್ತು ನೀಡಬೇಕಿದೆ. ಮಾತ್ರವಲ್ಲದೇ ಆಗಿಂದ್ದಾಗ್ಗೆ ಭಾಷೆಯನ್ನು ಪರಾರ್ಶೆಗೆ ಒಳಪಡಿಸಿ ಅದರ ಸ್ಥಿತಿಗತಿಗಳ ಕುರಿತು ಮೌಲ್ಯ ಮಾಪನ ಮಾಡಬೇಕು ಎಂದು ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಾಪಕಿ ಪದ್ಮಶ್ರೀ ಪ್ರೊ.ಅನ್ವಿತಾ ಅಬ್ಬಿ ಅಭಿಪ್ರಾಯಪಟ್ಟರು.
ಭಾರತೀಯ ಭಾಷಾ ಸಂಸ್ಥಾನ ಅಳಿವಿನಂಚಿನ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣಾ ಯೋಜನೆ ವತಿಯಿಂದ ಆಯೋಜಿಸಿದ್ದ ಭಾಷಾ ದಾಖಲೀಕರಣ ಕುರಿತ ಎರಡು ವಾರಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಹೊತ್ತು ತರುತ್ತಿರುವ ಜ್ಞಾನದ ವೈಜ್ಞಾನಿಕ ದಾಖಲೀಕರಣವಾಗಬೇಕಿದೆ ಎಂದು ಹೇಳಿದರು.
ಹಲವು ದಶಕಗಳಿಂದ ಅಳಿವಿನಂಚಿನಲ್ಲಿರುವ ಭಾಷೆಗಳ ಉಳಿಸುವ ಕಾರ್ಯ ನಡೆಯುತ್ತಿದೆ. ಈ ಸಂರ್ಭದಲ್ಲಿ ಕೇವಲ ಭಾಷೆ ಹಾಗೂ ಅದರಲ್ಲಿರುವ ವ್ಯಾಕರಣವನ್ನು ದಾಖಲಿಸಲಾಗುತ್ತದೆ. ಆದರೆ ಪ್ರತಿಯೊಂದು ಭಾಷೆಯೂ ಅದು ಉಗಮವಾದಾಗಿನಿಂದಲೂ ಕೆಲವೊಂದು ಜ್ಞಾನವನ್ನು ಹೊತ್ತಿ ತರುತ್ತದೆ. ಆ ರೀತಿಯ ಜ್ಞಾನ ಭಂಡಾರ ನಮಗೆ ಹಾಗೂ ಭವಿಷ್ಯದ ಪೀಳಿಗೆಗೆ ಮುಖ್ಯವಾಗಿದೆ. ಹಾಗಾಗಿ ಈ ಉಪಯುಕ್ತ ವಿಷಯದ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ದಾಖಲೀಕರಣ ಮಾಡಬೇಕಿದೆ ಸಲಹೆ ನೀಡಿದರು.
ಅಂಡಮಾನ್ ನಿಕೋಬಾರ್ನಲ್ಲಿ ಸುನಾಮಿಯಾದ ಸಂದರ್ಭದಲ್ಲಿ ಯಾವುದೇ ಒಬ್ಬ ಬುಡಕಟ್ಟು ವ್ಯಕ್ತಿಯೂ ಸಾಯಲಿಲ್ಲ. ಆ ಸಂದರ್ಭದಲ್ಲಿ ಏರು ಅಲೆಗಳು ಬರುತ್ತಿರುವುದನ್ನು ಗಮನಿಸಿ ತಮ್ಮ ಸಮುದಾಯದ ಎಲ್ಲರಿಗೂ ಒಂದು ಸೂಚನೆ ನೀಡಿದರು. ಮಾತ್ರವಲ್ಲದೇ ಈ ರೀತಿಯ ಪ್ರಕೃತಿ ವಿಕೋಪವಾದಾಗ ಏನು ಮಾಡಬೇಕೆಂದು ಅವರ ಹಿರಿಯರು ಹೇಳಿಕೊಟ್ಟ ಪಾಠವನ್ನು ತಾವು ಪಾಲಿಸುವುದಲ್ಲದೇ ತಮ್ಮ ಮಕ್ಕಳಿಗೂ ಮಾರ್ಗದರ್ಶನ ಮಾಡಿದರು. ಅದರಂತೆ ಸುನಾಮಿ ಬರುವ ಸಂದರ್ಭದಲ್ಲಿ ಎಲ್ಲರು ಓಡಲು ಆರಂಭಿಸಿದರು. ಮಾತ್ರವಲ್ಲದೇ ಸುಮಾರು 7 ಗಂಟೆಗಳ ಕಾಲ ಈಜುವ ಮುಖಾಂತರ ತಮ್ಮ ಜೀವ ಉಳಿಸಿಕೊಂಡರು. ಈ ಘಟನೆ ಪರಂಪರಾನುಗತವಾಗಿ ಬಂದ ಜ್ಞಾನದ ಪ್ರಾಮುಖ್ಯತೆ ಸಾರುತ್ತದೆ ಎಂದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್, ಕಾರ್ಯಕ್ರಮ ಸಂಯೋಜಕ ಡಾ.ಸುಯೋಜ್ ಸರ್ಕಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಬಾರಿ ಸದ್ದು ಮಾಡುತ್ತಿದ್ದು ಇವರ ಜೊತೆ ಅವರ ತಂದೆ…
ಬಂಡೀಪುರದಲ್ಲಿ ಸಪಾರಿಗೆ ತೆರಳಿದ್ದ ವಾಹನಗಳ ಸನಿಹದಲ್ಲೇ ಹುಲಿಯೊಂದು ಜಿಂಕೆಯನ್ನ ಭೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಂಬರುವ 7 ಮೇ 2024 ರಂದು ಜರುಗುವ ಸಾರ್ವತ್ರಿಕ ವಿಜಯಪುರ (ಮೀಸಲು) ಲೋಕಸಭೆ ಚುನಾವಣೆ ಪ್ರಚಾರದ ಅಂಗವಾಗಿ ಸ್ಟಾರ್ ಪ್ರಚಾರಕರು…
ಜಿಲ್ಲೆಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿಯವರನ್ನು ಭಾನುವಾರ ತಾಳಿಕೋಟೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜು…
ಬೀದರ್ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ…
ಕರ್ನಾಟಕ ಪ್ರವಾಸದಲ್ಲಿರುವ ಮೋದಿಗೆ ಗೋ ಬ್ಯಾಕ್ ಘೋಷಣೆ ಎದುರಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಡಿಎನ್ಎ ಕರ್ನಾಟಕ…