News Karnataka Kannada
Thursday, May 02 2024
ಮಂಡ್ಯ

ನಾಗಮಂಗಲ: ಶಿಕ್ಷಣ ಜೀವನದ ಸಾಧನೆಗೆ ಮೈಲಿಗಲ್ಲಾಗ ಬೇಕು- ಚೆಲುವರಾಯಸ್ವಾಮಿ

Nagamangala: Education should be a milestone in achieving life: Cheluvarayaswamy
Photo Credit : By Author

ನಾಗಮಂಗಲ: ಶಿಕ್ಷಣ ಎಂಬುದು ಕೇವಲ ಕಲಿಕೆಯಾಗದೆ ಜೀವನದ ಒಂದು ಮೈಲಿಗಲ್ಲಾಗಿ ಸಾಧನೆಯ ಪ್ರತೀಕವಾಗಬೇಕು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಬೆಳ್ಳೂರಿನ ಅಬ್ಬಾಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಅಭ್ಯಾಸ ಕಲಾಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದ ಮುಂದುವರೆದ ದೇಶಗಳನ್ನು ಗಮನಿಸಿದಾಗ ವಿದ್ಯಾವಂತರನ್ನು ಹೊಂದಿರುವ ಆ ದೇಶ ಪ್ರಗತಿಯ ಮುಂಚೂಣಿಯಲ್ಲಿ ಸಾಗುತ್ತಿದೆ. ಆ ನಿಟ್ಟಿನಲ್ಲಿ ನಾವುಗಳು ನಮ್ಮ ಗ್ರಾಮಾಂತರ ಪ್ರದೇಶದ ಮಕ್ಕಳ ಪೂರಕ ಶಿಕ್ಷಣ ನೀಡುವ ಮುಖಾಂತರ ಮುಂದುವರಿದ ದೇಶಗಳ ಸಮಾನಂತರವಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಂದಿನ ಶೈಕ್ಷಣಿಕ ಶಿಕ್ಷಣ ಪ್ರಗತಿಯ ದಾಪುಗಾಲಲ್ಲಿ ಶಿಕ್ಷಣ ಡಿಜಿಟಲ್ ಮಾದರಿಯತ ಸಾಗುತ್ತಿದ್ದು ನಾವುಗಳು ಇರುವಲ್ಲಿ ತಂತ್ರಜ್ಞಾನದ ಯುಗದತ್ತ ಸಾಗುತ್ತಿದ್ದು ಇಂತಹ ಪೈಪೋಟಿಯ ಬೆಳವಣಿಗೆಯಲ್ಲಿ ನಾವುಗಳು ಸಾಗಬೇಕಾಗಿರುವುದು ಅನಿವಾರ್ಯವಾಗಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಗ್ರಾಮಾಂತರ ಪ್ರದೇಶದ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮ ನಿಜಕ್ಕೂ ಗ್ರಾಮೀಣ ಮಕ್ಕಳ ಶಿಕ್ಷಣದ ಕಲಿಕೆಗೆ ಪೂರಕ ವ್ಯವಸ್ಥೆಯಾಗಿದೆ ಎಂದರು.

ನಾಗಮಂಗಲ ತಾಲೂಕು ವೃತ್ತ ನಿರೀಕ್ಷಕ ನಿರಂಜನ್ ಮಾತನಾಡಿ, ಮಕ್ಕಳ ಶಿಕ್ಷಣದ ಬೆಳವಣಿಗೆಯಲ್ಲಿ ಹಾಗೂ ಅಭ್ಯಾಸದ ನಿರಂತರ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಣ್ಯರು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು