ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ಕಳೆದ ವಾರದಂದು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿ ಕುಟುಂಬದವರನ್ನು ಭೇಟಿಯಾದ ಶಾಸಕ ಜಮೀರ್ ಅಹ್ಮದ್ ಬಾಲಕಿಯ ತಂದೆ ತಾಯಿಗೆ ಸಾಂತ್ವನ ಹೇಳಿದರು.
ಬಾಲಕಿ ಕುಟುಂಬದ ಭೇಟಿ ವೇಳೆ 5 ಲಕ್ಷ ರೂಪಾಯಿ ನೆರವು ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಟ್ಯೂಷನ್ ಕ್ಲಾಸಿಗೆ ಹೋಗಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಘಟನೆ ಅತ್ಯಂತ ಅಮಾನುಷ ಕೃತ್ಯ. ಇಂತಹ ಕೃತ್ಯವೆಸಗಿದ ಪಾಪಿಯನ್ನು ತುಂಡು ತುಂಡಾಗಿ ಕತ್ತರಿಸಬೇಕು. ಮನುಷ್ಯರು ಯಾರೂ ಮಾಡುವ ಕೆಲಸವಲ್ಲವಿದು. ಇಂತಹ ಪ್ರಕರಣಗಳಿಗೆ ಪ್ರತ್ಯೇಕ ಕಾನೂನು ರಚನೆ ಮಾಡಬೇಕು ಎಂದು ಆಕ್ರೋಶ ಹೂರಹಾಕಿದರು.