ಮಂಡ್ಯ: ಖಾತ್ರಿ ಕೆಲಸ ಸಮರ್ಪಕ ಜಾರಿಗಾಗಿ ಬಾಕಿ ಕೂಲಿ ಪಾವತಿಗೆ, ಕಾಯಕ ಬಂಧುಗಳ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಹಾಗೂ ಪಂಚಾಯತ್ ರಾಜ್ ಕಾಯ್ದೆ ನಿಯಮದಡಿ ನೀರು ಕೊಡಲು ಒತ್ತಾಯಿಸಿ ಭಾರತೀನಗರ ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮ ಪಂಚಾಯಿತಿ ಎದುರು ಪಿಡಿಓ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ತಳಗವಾದಿ ಕೃಷಿ ಕಾರ್ಮಿಕರ ಸಂಘದ ವಲಯ ಸಮಿತಿ ಅಧ್ಯಕ್ಷ ಆನಂದ್ ಮಾತನಾಡಿ, ಕಾಡುಕೊತ್ತನಹಳ್ಳಿ, ಭುಜವಳ್ಳಿ, ಕಪರೆಕೊಪ್ಪಲು, ಗ್ರಾಮದ ಕೂಲಿ ಕಾರ್ಮಿಕರು ಎರಡು ವಾರಕ್ಕೂ ಹೆಚ್ಚು ಮಾನವ ದಿನಗಳು ಕೆಲಸ ನಿರ್ವಹಿಸಿದ್ದು, ಇದುವರೆಗೂ ಕೂಲಿ ಕೊಡದೇ ಎರಡು ವಾರದ ಎನ್.ಎಂ.ಆರ್.ಅನ್ನು ಜೀರೋ ಮೂಲಕ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸುವುದನ್ನು ಕೃಷಿ ಕೂಲಿಕಾರರ ಸಂಘಟನೆ ಗ್ರಾಮ ಸಮಿತಿಗಳು ತಿವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಕೃಷಿ ಕೂಲಿಕಾಕರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ ಕುಮಾರ್, ತಾ.ಉಪಾಧ್ಯಕ್ಷ ಹೊನ್ನಯ್ಯ,ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಗ್ರಾಮ ಘಟಕದ ಅದ್ಯಕ್ಷ ರೇಣುಕಮ್ಮ, ಕಪನಿಗೌಡ, ಮಹದೇವಮ್ಮ ಮತ್ತಿತರರು ಇದ್ದರು.