ಮಂಡ್ಯ: ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಸೋಮವಾರ ಜೆಡಿಎಸ್ ಭದ್ರಕೋಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿ ಮತ ಯಾಚಿಸಿದರು. ಮಂಡ್ಯ ನಗರಗಳ 100 ಅಡಿ ರಸ್ತೆಯಿಂದ ಮಹಾವೀರ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಸಲಾಯಿತು. ರಸ್ತೆಯುದ್ದಕ್ಕೂ ಜನರು ಪುಷ್ಪವೃಷ್ಟಿ ಮಾಡಿ ಸಿಎಂ ಬಸವರಾಜ್ಗೆ ಹೂಮಾಲೆ ಹಾಕುವ ಮೂಲಕ ಸ್ವಾಗತಿಸಿದರು. ಸಿಎಂ ರೋಡ್ ಶೋನಲ್ಲಿ ನಟಿ ತಾರಾ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಭಾಷಣ ಮಾಡಿದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನರೇಂದ್ರ ಮೋದಿ ಬಂದ ನಂತರ ಮಂಡ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಶ್ರಮಪಟ್ಟರೆ ಈ ಗಾಳಿ ಸುನಾಮಿಯಾಗುತ್ತದೆ ಎಂದರು.
ಮಾಜಿ ಸಚಿವ ಎಸ್.ಡಿ.ಜಯರಾಂ ಅವರು ಮಂಡ್ಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು . ಮಂಡ್ಯದ ಮಣ್ಣು ಮಣ್ಣಲ್ಲ ಚಿನ್ನ. ರೈತರ ಬೆವರು ಸುರಿಸಿ ಬಂಗಾರದ ಬೆಳೆ ಬರಲಿದೆ ಎಂದರು. ಮಂಡ್ಯದ ಜನರು ತುಂಬಾ ಉದಾರಿಗಳು. . ಸುಮಲತಾ ಅಕ್ಕ ಸಂಸತ್ತಿನಲ್ಲಿ ಕನ್ನಡದ ದನಿ ಎತ್ತಿದ್ದಾರೆ. ಮೈಸೂರು ಸಕ್ಕರೆ ಕಾರ್ಖಾನೆ ಆರಂಭಿಸಲು ಅಂಬರೀಷ್ ಮತ್ತು ಸುಮಲತಾ ಶ್ರಮಿಸಿದ್ದಾರೆ ಎಂದರು. 75 ವರ್ಷಗಳಷ್ಟು ಹಳೆಯದಾದ ಕೆಆರ್ ಎಸ್ ಜಲಾಶಯದ ಎಲ್ಲ ಕ್ರೆಸ್ಟ್ ಗೇಟ್ ಗಳನ್ನು ಬದಲಾಯಿಸಿದ್ದೇವೆ. . ಜಿಲ್ಲೆಯ ಹಲವು ನಾಯಕರು ಸಚಿವರಾಗಿದ್ದಾರೆ. ಕೆಆರ್ ಎಸ್ ಜಲಾಶಯ ನಮ್ಮ ಆಸ್ತಿ ಎಂದರು. ಅದನ್ನು ಉಳಿಸುವುದು ನಮ್ಮ ಕರ್ತವ್ಯ. ವಿಸಿ ಕಾಲುವೆ ಅಭಿವೃದ್ಧಿಪಡಿಸಿದ್ದೇವೆ. ಮಂಡ್ಯ ಜಿಲ್ಲೆಯ ರೈತರ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. . ಈ ಭಾಗದ ರೈತರ ಕಬ್ಬು ಬೇರೆ ಕಾರ್ಖಾನೆಗೆ ಹೋಗಬಾರದು ಎಂಬ ಉದ್ದೇಶದಿಂದ ಮೈಶುಗರ್ ಕಾರ್ಖಾನೆಯನ್ನು ಪುನರಾರಂಭಿಸಿದ್ದೇವೆ ಎಂದರು. ಮಂಡ್ಯ ನಗರವನ್ನು ಹೊಸ ನಗರವನ್ನಾಗಿ ಮಾಡುತ್ತೇವೆ ಎಂದರು