News Karnataka Kannada
Thursday, May 02 2024
ಸಮುದಾಯ

ಭಾರತೀನಗರ: ಕಾರ್ಕಳ್ಳಿ ಕಾಲಭೈರವೇಶ್ವರ ಸ್ವಾಮಿಯ ಅದ್ಧೂರಿ ರಥೋತ್ಸವ

Bharathinagar: Karkalli Kalabhairaveshwara Swamy's Grand Rathotsava
Photo Credit : News Kannada

ಭಾರತೀನಗರ: ಸಮೀಪದ ಕಾರ್ಕಳ್ಳಿ ಕಾಲಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ದೇವಾಲಯದ ಬಳಿಯ ರಥದ ಕೊಠಡಿಯ ಮುಂಭಾಗ ಸಂಪ್ರದಾಯದಂತೆ ದೇವಾಲಯದ ಅರ್ಚಕರು, ಊರಿನ ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿದರು. ನಂತರ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಬಸವೇಶ್ವರ ಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಚಿಕ್ಕಅರಸೀನಕೆ ಕಾಲಭೈರವೇಶ್ವರ ದೇವರ ಬಸವ, ಪೂಜೆ, ಬಸವೇಶ್ವರಸ್ವಾಮಿ ದೇವರ ಬಸವ ಪೂಜೆ, ಬೊಮ್ಮನಹಳ್ಳಿ ಪಟ್ಟಲದಮ್ಮ ದೇವರ ಪೂಜೆ, ನಂದಿ ಕಂಭಗಳು, ಧ್ವಜಗಳು, ವಿರಾಗಸೆ, ಡೊಳ್ಳು, ಚರ್ಮವಾದ್ಯ ಮೇಳಗಳ ಸಮೇತ ರಥವನ್ನು ರಾಜ ಬೀದಿಯಲ್ಲಿ ಎಳೆಯಲಾಯಿತು. ಬಳಿಕ ಗ್ರಾಮದ ಪ್ರಮುಖ ರಥ ಬೀದಿಯಲ್ಲಿ ಒಂದು ಸುತ್ತು ಹಾಕಿಸಿ ದೇವಾಲಯದ ಮುಂಭಾಗಕ್ಕೆ ಎಳೆದು ರಥವನ್ನು ತರಲಾಯಿತು.

ಈ ವೇಳೆ ದೇವಾಲಯದ ಮುಂಭಾಗ ಅರ್ಚಕರು ರಥಕ್ಕೆ ಅಂತಿಮ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಮಂಗಳ ಹಾಡಿದರು. ಬಸವೇಶ್ವರಸ್ವಾಮಿ ಭಕ್ತಾಧಿಗಳು ಹಣ್ಣು, ಜವನ ಎಸೆದು ಪುನೀತರಾದರು. ರಥೋತ್ಸವದ ನಂತರ ದೇವರ ಪೂಜೆಗಳು, ಬಸವಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಸಿದವು. ಸಹಸ್ರಾರು ಭಕ್ತಾಧಿಗಳು ರಥೋತ್ಸವ ವೀಕ್ಷಿಸಿ ಕಣ್ಮನ ತಣಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು