News Karnataka Kannada
Thursday, May 02 2024
ಸಮುದಾಯ

ಭಾರತೀನಗರ: ಶ್ರೀಬೊಮ್ಮಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನ್ನಸಂತರ್ಪಣೆ

Bharathinagar: Annasanthapana at Sri Bommalingeshwara Swamy Sannidhi
Photo Credit : By Author

ಭಾರತೀನಗರ: ಇಲ್ಲಿಗೆ ಸಮೀಪದ ಅಣ್ಣೂರು ಗ್ರಾಮದಲ್ಲಿ ಶ್ರೀಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಮಹೋತ್ಸವ ಹಾಗೂ ಬೃಹತ್ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿತು.

ಅಣ್ಣೂರು ಗ್ರಾಮದ ಮಹಾಕಾಳಮ್ಮ ದೇವಸ್ಥಾನದಿಂದ ಗ್ರಾಮದೇವರಾದ ಶ್ರೀ ತಿಮ್ಮಪ್ಪ, ಶ್ರೀ ಅಮೃತೇಶ್ವರ, ಶ್ರೀ ಮಹಾಕಾಳಮ್ಮ, ಶ್ರೀಮಾರಮ್ಮ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ಅಟ್ಟಿಮಾರಮ್ಮ ದೇವರುಗಳು ಮೆರವಣಿಗೆ ಮೂಲಕ ಶ್ರೀಬೊಮ್ಮಲಿಂಗೇಶ್ವರಸ್ವಾಮಿ ಸನ್ನಿಧಿಗೆ ಆಗಮಿಸಿದವು. ನಂತರ ಗ್ರಾಮದೇವತೆಗಳನ್ನು ಹೂವಿನಿಂದ ಅಲಂಕರಿಸಿ ಹೂ-ಹೊಂಬಾಳೆಯ ತಂದು ಶ್ರೀಬೋರಪ್ಪ ದೇವಸ್ಥಾನದ ಸನ್ನಿಧಿಗೆ ತೆರಳಿ ಪೂಜೆಸಲ್ಲಿಸಿದ ಬಳಿಕ ಉತ್ಸವ ಜರುಗಿತು.

ತದ ನಂತರ ಶ್ರೀಬೊರಪ್ಪ ದೇವಸ್ಥಾನದಿಂದ ಶ್ರೀಬೊಮ್ಮಲಿಂಗೇಶ್ವರ ಸನ್ನಿಧಿಗೆ ಆಗಮಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ ಕೂಡಲೇ ದೇವರುಗಳ ಉತ್ಸವ ಜರುಗಿತು. ತಮಟೆ ಸದ್ದಿಗೆ ಭಕ್ತಾಧಿಗಳು ಕುಣಿದು ಕುಪ್ಪಳಿಸಿದರು.

ಶ್ರೀಬೊಮ್ಮಲಿಂಗೇಶ್ವರ ದೇವರಿಗೆ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಸುತ್ತ-ಮುತ್ತಲ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತಾಧಿಗಳು ಮೆರವಣಿಗೆ ಮತ್ತು ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಏಕಕಾಲಕ್ಕೆ 6 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳನ್ನು ಪಂಕ್ತಿಯಲ್ಲಿ ಕೂರಿಸಿ ಅನ್ನಸಂರ್ಪಣೆ ಮಾಡಲಾಯಿತು. ಪಂಕ್ತಿಯಲ್ಲಿ ಕೂತಿದ್ದ ಭಕ್ತಾಧಿಗಳ ಸುತ್ತ ಅನ್ನಸಂತರ್ಪಣಾ ಸೇವಾಕರ್ತರಾದ ಗಾಯಿತ್ರಿ ಶ್ರೀನಿವಾಸ್ ಮತ್ತು ಅರುಣಾಶರತ್‌ಕುಮಾರ್ ಕುಟುಂಬದವರು ಧೂಪ ಹಿಡಿದು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತಾಧಿಗಳು ಪ್ರಸಾದ ಸ್ವೀಕರಿಸಿದರು. ರಾತ್ರಿ ಗ್ರಾಮದ ಸುತ್ತಲೂ ದೇವರುಗಳ ಉತ್ಸವ ಜರುಗಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು