News Karnataka Kannada
Thursday, May 02 2024
ಮಂಡ್ಯ

ಭಾರತೀನಗರ: ಕಾಡುಕೊತ್ತನಹಳ್ಳಿಯಲ್ಲಿ ಸಾಮೂಹಿಕ ಸಹಪಂಕ್ತಿ ಉಪಹಾರ ಕೂಟ

Bharathinagar: A mass breakfast party at Kadukottanahalli
Photo Credit : By Author

ಭಾರತೀನಗರ: ಸಮೀಪದ ಕಾಡುಕೊತ್ತನಹಳ್ಳಿಯಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್ ಹಾಗೂ ಸಮಾಜ ಸೇವಕ ಕದಲೂರು ಉದಯ್ ಹಾಗೂ ಪ್ರಗತಿ ಪರ ಸಂಘಟನೆಯ ಮುಖಂಡರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಸಾಮೂಹಿಕ ಸಹಪಂಕ್ತಿ ಉಪಹಾರ ಕೂಟಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಕದಲೂರು ಉದಯ್ ಅವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ಬೆಳೆದ ಬಸವಣ್ಣ ಅಂದೇ ಅಸ್ಪೃಶ್ಯತೆ ವಿರುದ್ದ ತನ್ನದೇ ಆದ ರೀತಿಯಲ್ಲಿ ದೊಡ್ಡ ಸಾಮಾಜಿಕ ಕ್ರಾಂತಿ ನಡೆಸಿ ಶೋಷಿತರ ಹಾಗೂ ದಲಿತ ಸಮುದಾಯಗಳ ಜನರ ಬಾಳಿನಲ್ಲಿ ಬೆಳಕು ಚಲ್ಲಿದರು. ಈ ರೀತಿಯ ಕಾರ್ಯಕ್ರಮ ಪ್ರತಿ ಗ್ರಾಮದಲ್ಲೂ ನಡೆದರೆ ಜಾತೀಯತೆ ಅಸ್ಪೃಶ್ಯತೆ ತೊಲಗಲು ಸಾಧ. ಇಂತಹ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಬೇಕಾದದ್ದು ನಮ್ಮೆಲರ ಆದ್ಯ ಕರ್ತವ್ಯ ಎಂದರು.

ಸಮಾಜದ ಎಲ್ಲಾ ಜಾತಿಯ ಜನರಿಂದ ಈ ಅನಿಷ್ಟ ಪದ್ಧತಿ ತೊಲಗಿಸಲು ಸಾದ್ಯವಿದೆ. ದಲಿತರು ಇಂದಿಗೂ ಕೆಲ ಗ್ರಾಮಗಳಲ್ಲಿ ದೇವಸ್ಥಾನಗಳಿಗೆ ಹೋಟೆಲ್ ಗಳಿಗೆ, ಕ್ಷೌರದ ಅಂಗಡಿಗಳಲ್ಲಿ ನಿರ್ಬಂಧ ಹೇರಲಾಗಿದೆ. ಇದರ ವಿರುದ್ಧ ಇತರೆ ಸಮಾಜದ ಜನರು ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಕೊಡಬೇಕಿದೆ ಎಂದರು. ಇಂತಹ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಚಿದಂಬರಂ ಮೂರ್ತಿ ಅವರು ತಮ್ಮ ಹುಟ್ಟು ಹಬ್ಬವನ್ನು ಸಹ ಪಂಕ್ತಿ ಉಪಹಾರ ಕೂಟ ಆಯೋಜಿಸಿ ಎಲ್ಲಾ ಧರ್ಮ ಎಲ್ಲಾ ಜಾತಿಯ ಜನರನ್ನು ಒಂದೆಡೆ ಸೇರಿಸಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಉತ್ತಮವಾದ ಬೆಳೆವಣಿಗೆ ಎಂದು ಪ್ರಶಂಸಿದರು. ಇತ್ತೀಚಿನ ದಿನಗಳಲ್ಲಿ ಜಾತಿ ನಿರ್ಮೂಲನೆ ಮಾಡುವ ಪ್ರಕ್ರಿಯೆ ಹೆಚ್ಚಾಗಿ ನಡೆಯುತ್ತಿದ್ದು ಸಾರ್ವಜನಿಕರು ಪ್ರಜ್ಞಾವಂತರಾಗಿ ಜಾತಿ ನಿರ್ಮೂಲನೆಗೆ ಹೋರಾಡುತ್ತಿದ್ದಾರೆ. ಯುವ ಸಮೂಹಗಳು ಹೆಚ್ಚು ಹೆಚ್ಚು ಶಿಕ್ಷಣ ಪಡೆದು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳು ಹೋಗಲಾಡಿಸುವ ನಿಟ್ಟಿನಲ್ಲಿ ಹೊಸ ಬದಲಾವಣೆ ರೂಪದಲ್ಲಿ ಕಾರ್ಯಕ್ರಮ ರೂಪಿಸಿ ಜಾತಿ ಪದ್ದತಿಯ ನಿರ್ಮೂಲನೆ ಮಾಡಬೇಕು ಎಂದರು

ಸಾಮಾಜಿಕ ಹೋರಾಟಗಾರ ಚಿದಂಬರಂ ಮೂರ್ತಿ ರವರು ತಮ್ಮ ಹುಟ್ಟು ಹಬ್ಬವನ್ನು ಸಹ ಪಂಕ್ತಿ ಉಪಹಾರ ಕೂಟ ಆಯೋಜಿಸಿ ಎಲ್ಲಾ ಧರ್ಮ ಎಲ್ಲಾ ಜಾತಿಯ ಜನರನ್ನು ಒಂದೆಡೆ ಸೇರಿಸಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಉತ್ತಮವಾದ ಬೆಳೆವಣಿಗೆ ಎಂದು ಪ್ರಶಂಸಿದರು.

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕೂಲಿ ಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು, ಚಿದಂಬರಂ ಮೂರ್ತಿ, ಮಾಜಿ ಜಿಪಂ ಸದಸ್ಯ ಎ.ಟಿ. ಬಲ್ಲೆಗೌಡ, ರೈತ ಮುಖಂಡ ಅಣ್ಣುರು ಮಹೇಂದ್ರ,ರಘು ವೆಂಕಟೆಗೌಡ, ಕರಡಕೆರೆ ಯೋಗೇಶ್, ವಸಂತಮ್ಮ ಗ್ರಾಪಂ ಸದಸ್ಯೆ ದೇವಿರಮ್ಮ , ಶ್ರೀಕ ಶ್ರೀನಿವಾಸ, ಹನುಮೇಶ್, ಹೆಮ್ಮನಹಳ್ಳಿ ಕೃಷ್ಣ, ಹುಲಿಗೆರೆಪುರ ಮಹದೇವು ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು