News Karnataka Kannada
Saturday, May 04 2024
ಮಂಡ್ಯ

ಸರ್ಕಾರಿ ಇಲಾಖೆಗಳೆಲ್ಲವೂ ರಫ್ತು ಉತ್ತೇಜನಕ್ಕೆ ಸಹಕರಿಸಬೇಕು

New Project 2021 09 24t202221.057
Photo Credit :

ಮಂಡ್ಯ: ಜಿಲ್ಲೆಯು ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದರೂ ಕೈಗಾರಿಕಾಭಿವೃದ್ಧಿಯಲ್ಲಿ ಕೊಂಚ ಹಿಂದುಳಿದಿದೆ ಹಾಗಾಗಿ ಜಿಲ್ಲೆಯಲ್ಲಿ ರಫ್ತುನ್ನು ಉತ್ತೇಜಿಸುವ ಮೂಲಕ ಕೈಗಾರಿಕಾಭಿವೃದ್ಧಿಗಾಗಿ ಎಲ್ಲ ಇಲಾಖೆಗಳು ಕೈಜೋಡಿಸಿ ಎಂದು ಜಿಪಂ ಸಿಇಓ ಜಿ.ಆರ್.ಜೆ ದಿವ್ಯಪ್ರಭು ಹೇಳಿದರು.

ನಗರದ ಹಿಂದಿ ಭವನದಲ್ಲಿ ಅಜಾದ್ ಕಿ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ವತಿಯಿಂದ ರಫ್ತು ಉತ್ತೇಜನಕ್ಕಾಗಿ ಆಯೋಜಿಸಲಾಗಿದ್ದ ವಾಣಿಜ್ಯ ಸಪ್ತಾಹ- ರಫ್ತುದಾರರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಫ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಅತ್ಯಗತ್ಯವಾಗಿದೆ. ಹೊರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೂ ಕೂಡ ಇಲ್ಲಿನ ಉತ್ಪನ್ನಗಳು ಅಗತ್ಯವಾಗಿರುವುದರಿಂದ ರಫ್ತು ಉತ್ತಮ ಮಾರ್ಗವಾಗಿದೆ. ಆನ್‌ಲೈನ್ ಸೌಲಭ್ಯದಿಂದ ಪ್ರಪಂಚದ ಯಾವುದೇ ದೇಶಗಳಿಂದ ಬೇಕಾದಂತಹ ಉತ್ಪನ್ನಗಳನ್ನು ಪಡೆಯಬಹುದಾಗಿದ್ದು ರಫ್ತು ಅದರ ಒಂದು ಭಾಗವಾಗಿದೆ ಆದರೆ ಇಂತಹ ಸೌಲಭ್ಯಗಳನ್ನು ನಮ್ಮ ಜಿಲ್ಲೆಯಲ್ಲಿಯೂ ಬಳಕೆಗೆ ತರುವುದು ಅಗತ್ಯವಾಗಿದೆ. ಎಳನೀರಿನ ಗಂಜಿಯಲ್ಲಿ ಆಹಾರೋತ್ಪನ್ನಗಳನ್ನು ತಯಾರಿಸುವಂತಹ ವಿಭಿನ್ನ ಪ್ರಯತ್ನಗಳು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಇರುವ ವ್ಯವಸ್ಥೆ ಹಾಗೂ ಕಚ್ಛಾವಸ್ತುಗಳನ್ನು ಉಪಯೋಗಿಸಿಕೊಂಡು ಉದ್ದಿಮೆ ಆರಂಭಿಸಿ ರಫ್ತು ಮಾಡುವಲ್ಲಿ ಚಿಂತಿಸಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ರಾಜ್ಯದ ಪ್ರಮುಖ ನಗರಗಳಾದ ಮೈಸೂರು-ಬೆಂಗಳೂರು ಅಕ್ಕಪಕ್ಕದಲ್ಲಿಯೇ ಇರುವುದರಿಂದ ಉತ್ಪನ್ನಗಳಿಗೆ ಸುಲಭವಾಗಿ  ಮಾರುಕಟ್ಟೆಯನ್ನು ಒದಗಿಸಬಹುದಾಗಿದೆ ಹಾಗೂ ಬಹುಪಾಲು ಉದ್ದಿಮೆಗಳಿಗೆ ಕಚ್ಛಾವಸ್ತುಗಳನ್ನು ರೈತರೇ ಪೂರೈಸುವುದರಿಂದ ರೈತರು ಹಾಗೂ ಉದ್ದಿಮೆದಾರರಿಗೂ ಅನುಕೂಲವಾಗುತ್ತದೆ ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸರ್ಕಾರದ ಯೋಜನೆಗಳ ಹಿಂದೆ ಹಲವಾರು ತಾಂತ್ರಿಕ ತಜ್ಞರ ವಿಚಾರವಂತಿಕೆ ಹೆಚ್ಚಿರುತ್ತದೆ ಆದರೆ ಅವುಗಳ ಅನುಷ್ಟಾನದ ಹಂತದಲ್ಲಿ ಯಾರಿಗೆ ಯಾವ ಯೋಜನೆ ಯಾವಾಗ ಬೇಕು ಎಂಬುದು ಬಹಳ ಮುಖ್ಯವಾಗುತ್ತದೆ. ಕೈಗಾರಿಕಾಭಿವೃದ್ಧಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳು ನಮ್ಮ ಜಿಲ್ಲೆಯಲ್ಲಿದೆ ಆದರೂ ನಾವು ಕೈಗಾರಿಕಾಭಿವೃದ್ಧಿಯಲ್ಲಿ ಹಾಗೂ ರಫ್ತು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ, ಹಾಗಾಗಿ ರೈತರು, ಉದ್ದಿಮೆದಾರರು ರಫ್ತು ಬಗೆಗಿನ ಯೋಜನೆಗಳು, ಅನುಕೂಲಗಳು ನೀತಿನಿಯಮಗಳ ಬಗ್ಗೆ ಅರಿವು ಪಡೆಯುವುದು ಅಗತ್ಯ ಎಂದರು

ಕಾರ್ಯಗಾರದಲ್ಲಿ ರಫ್ತು ಬಗೆಗಿನ ಸರ್ಕಾರದ ಸೌಲಭ್ಯಗಳು ಹಾಗೂ ರಫ್ತು ಆರಂಭಿಸುವ ಮುಂಚಿತವಾಗಿ ಅನುಸರಿಸಬೇಕಾದ ಮೂಲಭೂತ ನಿಯಮಗಳು, ರಫ್ತು ಅವಕಾಶಗಳು ಹಾಗೂ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ.ಶಿವಲಿಂಗಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಎಂ.ಶೈಲಜಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧೀಕ್ಷಕರಾದ ಎನ್. ಶಿವಲಿಂಗಯ್ಯ, ಬೆಂಗಳೂರು ವಿಷನ್ ಬಿಸನೆಸ್ ಸಲ್ಯೂಶನ್ ಸಂಸ್ಥೆಯ ಆಮದು ಹಾಗೂ ರಫ್ತು ಸಂಯೋಜಕರಾದ ವೀಣಾ ವೆಂಕಟೇಶ್, ಇತರೆ ಕೈಗಾರಿಕಾ ಸಂಘಗಳ ಅಧ್ಯಕ್ಷರು, ಉದ್ದಿಮೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು