News Karnataka Kannada
Thursday, May 02 2024
ಮಂಡ್ಯ

ಕೌಟುಂಬಿಕ ಕಲಹ: ಪುಟ್ಟ ಮಗುವಿನ ಎದುರೇ ನೇಣಿಗೆ ಶರಣಾದ ತಾಯಿ

17-year-old girl found murdered in field
Photo Credit :

ಮಂಡ್ಯ: ಕೌಟುಂಬಿಕ ಕಲಹ, ಮಾನಸಿಕ ಒತ್ತಡಕ್ಕೆ ಬೇಸತ್ತು ಇತ್ತೀಚೆಗೆ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೊಬ್ಬ ತಾಯಿ ತನ್ನ ಪುಟ್ಟ ಮಗುವಿನ ಎದುರೇ ನೇಣಿಗೆ ಕೊರಳೊಡ್ದಿದ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ.

36 ವರ್ಷದ ಕವಿತಾ ನೇಣಿಗೆ ಶರಣಾದ ಮಹಿಳೆ. ಕವಿತಾಳಿಗೆ ಇಬ್ಬರು ಮಕ್ಕಳಿದ್ದಾರೆ. ಅದರಲ್ಲೂ ಒಂದು ಮಗು ಇನ್ನೂ ಒಂದು ವರ್ಷದ ಪುಟ್ಟ ಕಂದಮ್ಮ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿನ ಎದುರಲ್ಲೇ ಕವಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರಪಂಚದ ಅರಿವೂ ಇಲ್ಲದ ಮಗು ತಾಯಿಗಾಗಿ ಅತ್ತು ಅತ್ತು ಕಣ್ಣೀರಿಟ್ಟು ಸುಸ್ತಾಗಿದ್ದಾಳೆ. ಮಗುವಿನ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಕಿಟಕಿ ತೆಗೆದು ನೋಡಿದಾಗ ಕವಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ದೈಹಿಕ ಶಿಕ್ಷಕನಾಗಿರುವ ರವಿಕುಮಾರ್ ಜತೆ 9 ವರ್ಷಗಳ ಹಿಂದೆ ಕವಿತಾ ಮದುವೆಯಾಗಿದ್ದು, ದಂಪತಿಗೆ 7 ವರ್ಷದ ಗಂಡು ಮಗು ಹಾಗೂ ಒಂದು ವರ್ಷದ ಹೆಣ್ಣು ಮಗು ಇಬ್ಬರು ಮಕ್ಕಳಿದ್ದಾರೆ. ಇದೀಗ ಕವಿತಾ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸಹಾಯವಾಣಿಗೆ ಕರೆ ಮಾಡಿ:

ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು