News Karnataka Kannada
Monday, April 29 2024
ಮಡಿಕೇರಿ

ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ: ಬೈಕ್ ಜಖಂ

ಕೊಡಗಿನಲ್ಲಿ ಕಾಡಾನೆಗಳ ಆರ್ಭಟ ಮುಂದುವರೆದಿದ್ದು, ಯಾವಾಗ ಯಾರ ಮೇಲೆ ದಾಳಿ ಮಾಡುತ್ತವೆಯೋ ಎನ್ನಲಾಗದ ಪರಿಸ‍್ಥಿತಿ ನಿರ್ಮಾಣವಾಗಿದೆ. ಈಗ ಕಾಫಿ ಕೊಯ್ಲು ಕಾರಣ ಕಾರ್ಮಿಕರು ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದು ಭಯದಲ್ಲಿಯೇ ಕೆಲಸ ಮಾಡುವಂತಾಗಿದೆ.
Photo Credit : By Author

ಮಡಿಕೇರಿ: ಕೊಡಗಿನಲ್ಲಿ ಕಾಡಾನೆಗಳ ಆರ್ಭಟ ಮುಂದುವರೆದಿದ್ದು, ಯಾವಾಗ ಯಾರ ಮೇಲೆ ದಾಳಿ ಮಾಡುತ್ತವೆಯೋ ಎನ್ನಲಾಗದ ಪರಿಸ‍್ಥಿತಿ ನಿರ್ಮಾಣವಾಗಿದೆ. ಈಗ ಕಾಫಿ ಕೊಯ್ಲು ಕಾರಣ ಕಾರ್ಮಿಕರು ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದು ಭಯದಲ್ಲಿಯೇ ಕೆಲಸ ಮಾಡುವಂತಾಗಿದೆ.

ಈ ನಡುವೆ ಮದವೇರಿದ ಕಾಡಾನೆಯೊಂದು ಎಲ್ಲೆಂದರಲ್ಲಿ ಓಡಾಡಿದ್ದಲ್ಲದೆ, ಎದುಗಿಗೆ ಸಿಕ್ಕವರ ಮೇಲೆ ದಾಳಿ ಮಾಡಿದ್ದು ಪರಿಣಾಮ ಅರಣ್ಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ನ್ನು ಧ್ವಂಸ ಮಾಡಿರುವ ಘಟನೆಯೂ ಶನಿವಾರ ಸೋಮವಾರಪೇಟೆ ಬಳಿಯ ಕಾಜೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕರು ಇತರೆ ಸಿಬ್ಬಂದಿಗಳಾದ ಆರ್.ಆರ್.ಟಿ ತಂಡದ ದರ್ಶನ್,ಹರ್ಷಿತ್,ವಿನೋದ್ ಹಾಗೂ ಅರಣ್ಯ ರಕ್ಷಕರಾದ ಶ್ರೀಕಾಂತ್‌ ಅವರು ಶನಿವಾರ ಬೆಳಿಗ್ಗೆ 7.30ರ ಸಮಯದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮದವೇರಿದ ಕಾಡಾನೆಯೊಂದು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್‌ ನಿಂದ ಇವರತ್ತ ಧಾವಿಸಿದೆ. ಇದನ್ನರಿತ ಅವರು ಬೈಕ್ ಬಿಟ್ಟು ಓಡಿದ್ದಾರೆ. ಆದರೆ ಇವರತ್ತಲೇ ಬಂದ ಕಾಡಾನೆ ಬೈಕ್ ಎಸೆದು, ಗುದ್ದಿ ಜಖಂಗೊಳಿಸಿದೆ. ಅಲ್ಲದೆ ಗೇಟ್ ಕೂಡ ಹಾಳುಗೆಡವಿದೆ.

ಆ ನಂತರ ಅದು ತೋಟದ ಕಡೆಗೆ ಹೋಗಿದೆ. ಈ ಘಟನೆಯಿಂದ ಸ್ಥಳೀಯರು ಭಯಗೊಂಡಿದ್ದಾರೆ. ಬೇಸಿಗೆ ಸಮಯವಾದ ಕಾರಣ ಅರಣ್ಯದಲ್ಲಿ ಮೇವಿಗೆ ಕೊರತೆಯಾಗಿರುವ ಕಾರಣ ಮೇವು ಹಾಗೂ ನೀರನ್ನು ಅರಸಿಕೊಂಡು ಕಾಡಾನೆಗಳು ನಾಡಿನತ್ತ ಧಾವಿಸುತ್ತಿವೆ. ಹೀಗಾಗಿ ಯಾವಾಗ? ಎಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವುದನ್ನು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಏನೇ ಆದರೂ ಜನ ಎಚ್ಚರವಾಗಿರುವುದು ಒಳಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು