News Karnataka Kannada
Monday, April 29 2024
ಮಡಿಕೇರಿ

ವಿರಾಜಪೇಟೆ ಫೈನಾನ್ಸ್ ಕಂಪನಿಯಲ್ಲಿ ಸಿಬ್ಬಂದಿಗಳಿಂದ ವಂಚನೆ, ಪೊಲೀಸರಿಗೆ ದೂರು

Sakleshpur: FIR lodged against three for dowry harassment of daughter-in-law
Photo Credit : News Kannada

ಮಡಿಕೇರಿ: ವಿರಾಜಪೇಟೆ ವಿಜಯನಗರ ಒಂದನೇ ಸ್ಟೇಜಿನಲ್ಲಿ ಇರುವ ಭಾರತ್ ಫೈನಾನ್ಸಿಯಲ್ ಇಂಕ್ಲುಶನ್ ಕಂಪನಿಗೆ ಗ್ರಾಹಕರಿಗೆ ಸಂಸ್ಥೆ ಸಾಲ ನೀಡಿ ಕಂತಿನ ರೂಪದಲ್ಲಿ ಸಂಗ್ರಹಿಸಲಾದ ಒಟ್ಟು 8,98716 /- ಹಣವನ್ನು ಅಲ್ಲಿನ ಇಬ್ಬರು ಸಿಬ್ಬಂದಿಗಳು ವಂಚಿಸಿದ್ದಾರೆ ಎಂದು ಸಂಸ್ಥೆ ವ್ಯವಸ್ಥಾಪಕರು ವಿರಾಜ್ ಪೇಟೆ ನಗರ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರನ್ನು ನೀಡಿದ್ದಾರೆ.

ಕೆ ಆರ್ ನಗರ ತಾಲೂಕಿನ ಮಲ್ಲಾಳ್ ಗ್ರಾಮದ ಸಂತೋಷ್ ಎಂ.ಆರ್ ಹಾಗೂ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಕೆ.ಆರ್ ಸಂಜು ಕುಮಾರ್ ಇಬ್ಬರು ಮಹಿಳಾ ಸಂಘಗಳಿಗೆ ನೀಡಿದ ಸಾಲದ ಪ್ರತಿ ವಾರದ ಕಂತಿನ ಹಣವನ್ನು ಸಂಗ್ರಹಿಸಿ ನಿರಂತರವಾಗಿ 5 ತಿಂಗಳಿಂದ ಹಲವು ಮಹಿಳೆಯರ ಹಣವನ್ನು ಸಂಸ್ಥೆಗೆ ಪಾವತಿಸಿದೆ ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ಹಣ ಕಟ್ಟಬಹುದೆಂಬ ವಿಶ್ವಾಸದಿಂದ ಇದುವರೆಗೆ ಅವರಿಗೆ ಸಮಯ ಅವಕಾಶ ನೀಡಿದರು ಕೂಡ ಹಣ ಪಾವತಿಸದರಿಂದ ಶಾಖಾ ವ್ಯವಸ್ಥಾಪಕರಾದ ಎಂ ಎಸ್ ದಿಲೀಪ್ ಅವರು ವಿರಾಜ್ ಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ .ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು