ಮಡಿಕೇರಿ: ವಿರಾಜಪೇಟೆ ವಿಜಯನಗರ ಒಂದನೇ ಸ್ಟೇಜಿನಲ್ಲಿ ಇರುವ ಭಾರತ್ ಫೈನಾನ್ಸಿಯಲ್ ಇಂಕ್ಲುಶನ್ ಕಂಪನಿಗೆ ಗ್ರಾಹಕರಿಗೆ ಸಂಸ್ಥೆ ಸಾಲ ನೀಡಿ ಕಂತಿನ ರೂಪದಲ್ಲಿ ಸಂಗ್ರಹಿಸಲಾದ ಒಟ್ಟು 8,98716 /- ಹಣವನ್ನು ಅಲ್ಲಿನ ಇಬ್ಬರು ಸಿಬ್ಬಂದಿಗಳು ವಂಚಿಸಿದ್ದಾರೆ ಎಂದು ಸಂಸ್ಥೆ ವ್ಯವಸ್ಥಾಪಕರು ವಿರಾಜ್ ಪೇಟೆ ನಗರ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರನ್ನು ನೀಡಿದ್ದಾರೆ.
ಕೆ ಆರ್ ನಗರ ತಾಲೂಕಿನ ಮಲ್ಲಾಳ್ ಗ್ರಾಮದ ಸಂತೋಷ್ ಎಂ.ಆರ್ ಹಾಗೂ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಕೆ.ಆರ್ ಸಂಜು ಕುಮಾರ್ ಇಬ್ಬರು ಮಹಿಳಾ ಸಂಘಗಳಿಗೆ ನೀಡಿದ ಸಾಲದ ಪ್ರತಿ ವಾರದ ಕಂತಿನ ಹಣವನ್ನು ಸಂಗ್ರಹಿಸಿ ನಿರಂತರವಾಗಿ 5 ತಿಂಗಳಿಂದ ಹಲವು ಮಹಿಳೆಯರ ಹಣವನ್ನು ಸಂಸ್ಥೆಗೆ ಪಾವತಿಸಿದೆ ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಹಣ ಕಟ್ಟಬಹುದೆಂಬ ವಿಶ್ವಾಸದಿಂದ ಇದುವರೆಗೆ ಅವರಿಗೆ ಸಮಯ ಅವಕಾಶ ನೀಡಿದರು ಕೂಡ ಹಣ ಪಾವತಿಸದರಿಂದ ಶಾಖಾ ವ್ಯವಸ್ಥಾಪಕರಾದ ಎಂ ಎಸ್ ದಿಲೀಪ್ ಅವರು ವಿರಾಜ್ ಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ .ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.